Our Authors

ಅಚಿಂತ್ಯ ಚೈತನ್ಯ

ಅಚಿಂತ ಚೈತನ್ಯ ಮೂಲತಃ ಕರ್ನಾಟಕದ ಬೀರೂರಿನವರು. ತಂದೆಯ ಉದ್ಯೋಗದ ದೆಸೆಯಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಶಿಕ್ಷಣ ಪಡೆದವರು. ಎಂಜಿನಿಯರಿಂಗ್ ಮತ್ತು ವ್ಯವಹಾರಾಡಳಿತದ ಹಿನ್ನೆಲೆಯ ಈ ಲೇಖಕ ತತ್ವಶಾಸ್ತ್ರದ ಆಕರ್ಷಿತರಾಗಿ ವರ್ಷಗಳುರುಳಿದವು. ಚೆನ್ನೈನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಅಚಿಂತ್ಯ ಮಾತೃಮುಖದಿಂದ ಕಲಿತ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬರೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಚಿದಂಬರ ನರೇಂದ್ರ

ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

ಚೇತನಾ ತೀರ್ಥಹಳ್ಳಿ

ಅರಳಿಮರ ಬಳಗದ ಲೇಖಕಿ, ಸಂಪಾದಕಿ