“ಜಗತ್ತು ಭಗವಂತನ ಕನ್ನಡಿ, ಮತ್ತು ಮನುಷ್ಯನ ಹೃದಯ ಜಗತ್ತಿನ ಕನ್ನಡಿ” ಅನ್ನುತ್ತದೆ ಸೂಫಿ ಚಿಂತನೆ.
ಅಧ್ಯಾತ್ಮ ಯಾನಿಯು ಭಗವಂತನನ್ನು ಅರಿಯಬೇಕೆಂದರೆ ತನ್ನ ಹೃದಯದೊಳಕ್ಕೇ ಅವನನ್ನು ಅರಸಬೇಕು. ಬೆಳಕನ್ನು ಪಡೆಯಬೇಕೆಂದರೆ ತನ್ನ ಹೃದಯದಾಳಕ್ಕೆ ಧುಮುಕಬೇಕು. ಏಕೆಂದರೆ ನಮ್ಮ ಹೃದಯ ಜಗತ್ತಿನ ಕನ್ನಡಿಯಾಗಿದೆ; ಮತ್ತು ಜಗತ್ತು ಭಗವಂತನ ಕನ್ನಡಿಯಾಗಿದೆ. ನಮ್ಮೊಳಗೆ ಹೊಕ್ಕು ಹುಡುಕಿದರೆ ನಾವು ಯಾವತ್ತೂ ನಂದದ ಬೆಳಕನ್ನು ಹೊಂದುತ್ತೇವೆ, ಭಗವಂತನನ್ನು ಪಡೆಯುತ್ತೇವೆ – ಇದು ಮೇಲಿನ ಸೂಫಿ ಚಿಂತನೆಯ ವಿಸ್ತೃತಾರ್ಥ.
ಸೃಷ್ಟಿ ಮತ್ತು ಭಗವಂತ ಪರಸ್ಪರ ಎದುರುಬದುರಿಟ್ಟ ಕನ್ನಡಿಗಳಂತೆ. ಒಬ್ಬರೊಬ್ಬರ ಬಿಂಬ ಒಬ್ಬರೊಬ್ಬರೊಳಗೆ! ಇರುವುದು ಎರಡೇ ಆದರೂ ಅನಂತ ಪ್ರತಿಬಿಂಬಗಳು! ಹೀಗಿದೆ ಸೃಷ್ಟಿಯ ಜಡಚೇತನಗಳು ಮತ್ತು ಸೃಷ್ಟಿಕರ್ತನ ಸಂಬಂಧ.