ಇಂದಿನ ಸುಭಾಷಿತ, ಋಗ್ವೇದದಿಂದ…
||ಅರೇ ದೇವಾ, ದ್ವೇಷೋ ಅಸ್ಮಾದ್ ಯುಯೋತನ||
ಎಲೈ ದೇವತೆಗಳೇ, ನಮ್ಮನ್ನು ದ್ವೇಷಮುಕ್ತರಾಗಿ ಮಾಡಿ ~ ಋಗ್ವೇದ 10.63.12
ದ್ವೇಷವೇ ಸರ್ವನಾಶದ ಮೂಲ. ನಾಗರಿಕತೆಯ ಆರಂಭ ಕಾಲದಲ್ಲೇ ಇದನ್ನು ಪ್ರಾಜ್ಞರು ಮನಗಂಡಿದ್ದರು. ಆದ್ದರಿಂದಲೇ ನಮ್ಮ ಪ್ರಾಚೀನ ಋಷಿಗಳು “ನಮ್ಮನ್ನು ದ್ವೇಷಮುಕ್ತರನ್ನಾಗಿಸು” ಎಂದು ಭಗವಂತನಲ್ಲಿ ಮೊರೆ ಇಟ್ಟಿದ್ದು. ಈ ಪ್ರಾರ್ಥನೆ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ದ್ವೇಷಮುಕ್ತ ವಾತಾವರಣ ಕಲ್ಪಿಸಲು ಮೊದಲು ನಾವು ಅದರಿಂದ ಹೊರತಾಗಬೇಕಾಗಿದೆ.