ನಮ್ಮ ನಿಜವಾದ ರೂಪ ಯಾವುದು, ನಮ್ಮೊಳಗಿನ ನಿಜವಾದ ನಮ್ಮ ಅಸ್ತಿತ್ವವನ್ನು ನಾವು ಹೇಗೆ ತಿಳಿದುಕೊಳ್ಳಬೇಕು ಎಂದು ಸ್ವಾಮಿ ರಾಮತೀರ್ಥರು ತಮ್ಮ ಪ್ರವಚನದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾರೆ…. ~ ಸಂಗ್ರಹಾನುವಾದ : ಪ್ರಣವ ಚೈತನ್ಯ
ರಾಮತೀರ್ಥರು ಹೇಳುವ ಐದು ವಿಧದ ಮನುಷ್ಯರು… : ನಿಮ್ಮದು ಯಾವ ವಿಧ, ಕಂಡುಕೊಳ್ಳಿ!
ಜಗತ್ತಿನಲ್ಲಿ ನಮಗೆ ಐದು ವಿಧದ ಮನುಷ್ಯರು ಸಿಗುತ್ತಾರೆ. ಯಾರು ಈ ಐದು ವಿಧದ ಮನುಷ್ಯರು? ಅವರನ್ನು ಧರ್ಮದಿಂದಾಗಲಿ ದುಡ್ಡಿನಿಂದಾಗಲಿ ಬೇರೆ ಮಾಡಿ ಹೇಳಲಾಗುವುದಿಲ್ಲ, ಅವರ ಗುಣಗಳನ್ನು ಪರಿಶೀಲಿಸಿದ ನಂತರ ಈ ವರ್ಗಗಳನ್ನು ರಾಮತೀರ್ಥರು ಮಾಡಿದ್ದಾರೆ. ಅವರ ವಿವರಣೆಯನ್ನು ಓದಿ; ನೀವು ಯಾವ ವಿಧದವರು, ಯಾವ ವಿಧವನ್ನು ಆಯ್ದುಕೊಳ್ಳಬೇಕು, ನೀವೇ ನಿರ್ಧರಿಸಿ!! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು
ಮನುಜ ಯಂತ್ರಗಳಂತೆ ಆಗದಿರಲು ಏನು ಮಾಡಬೇಕು? ~ ಓಶೋ, ‘ದ ಬುಕ್ ಆಫ್ ಮ್ಯಾನ್’ #3
ಯಾವ ಮಗುವೂ ತಾನೊಂದು ಯಂತ್ರವಾಗಬೇಕು ಎಂದು ಹುಟ್ಟುವುದಿಲ್ಲ. ಚಿಕ್ಕ ಮಕ್ಕಳಿಗೆ ತಾವು ಮುಂದೆ ಏನಾಗಬೇಕು ಎಂದು ಕೇಳಿದಾಗ ಆ ಮಕ್ಕಳು ತಮ್ಮ ಕನಸುಗಳನ್ನು ಬಹಳ ಸೊಗಸಾಗಿ ಹೇಳುತ್ತವೆ. ಆದರೆ ಅವರಲ್ಲಿ ಎಷ್ಟು ಮಕ್ಕಳು ಅವರ ಕನಸುಗಳನ್ನು ಗೆಲ್ಲುತ್ತಾರೆ? ~ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ನಿರೂಪಣೆ : ಪ್ರಣವ ಚೈತನ್ಯ
ಪ್ರಸ್ತುತದಲ್ಲಿ ಬದುಕಲು ಕಲಿಯಿರಿ, ನೀವು ನೀವಾಗಿರಿ … ~ ಓಶೋ, ‘ದ ಬುಕ್ ಆಫ್ ಮ್ಯಾನ್’ #2
“ಒಂದು ಮಲ್ಲಿಗೆ ಹೂವು, ಅದು ಮಲ್ಲಿಗೆ ಹೂವು ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಒಂದು ದಾಸವಾಳ ಹೂವು, ಅದು ದಾಸವಾಳ ಬಿಟ್ಟರೆ ಬೇರೇನು ಆಗಲು ಸಾಧ್ಯವಿಲ್ಲ. ಮಲ್ಲಿಗೆ ಎಂದು ತಾನು ದಾಸವಾಳವಾಗಬೇಕೆಂದು ಪ್ರಯತ್ನಿಸುವುದಿಲ್ಲ. ದಾಸವಾಳ ಎಂದು ತಾನು ಮಲ್ಲಿಗೆಯಾಗಬೇಕೆಂದು ಯೋಚಿಸುವುದಿಲ್ಲ. ಅವು ಅತ್ತ್ಯಂತ ಆನಂದವಾಗಿ ತಮ್ಮ ಪ್ರಸ್ತುತವನ್ನು, ತಮ್ಮ ಇರುವಿಕೆಯನ್ನು ಅನುಭವಿಸುತ್ತವೆ. ಇದು ಪ್ರಕೃತಿಯ ನಿಯಮ. ಮನುಷ್ಯ ಮಾತ್ರ ಈ ನಿಯಮವನ್ನು ಅನುಸರಿಸದೆ ಪ್ರಸ್ತುತವನ್ನು ಮರೆತು ಬದುಕನ್ನು ಸಂಕೀರ್ಣ ಮಾಡಿಕೊಳ್ಳುತ್ತಾನೆ” ಅನ್ನುತ್ತಾರೆ ಓಶೋ ರಜನೀಶ್ | ದ […]
ದೇಹದ ಶಕ್ತಿ ಮತ್ತು ಅಂತ್ಯವಿರದ ಆತ್ಮಶಕ್ತಿ … | ಸ್ವಾಮಿ ರಾಮತೀರ್ಥ
ಎಲ್ಲಿ ವ್ಯತ್ಯಾಸ ಸಾಧ್ಯವಾಗುತ್ತದೆಯೋ ಅಲ್ಲಿ ಒಂದಲ್ಲ ಒಂದು ದಿನ ಅಂತ್ಯವಿರುತ್ತದೆ. ಯಾವುದು ದೃಢವಾಗಿ ನಿಂತಿರುತ್ತದೆಯೊ ಅದು ಎಂದಿಗೂ ಶಾಶ್ವತ ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು
ಸಂತುಷ್ಟ ಜೀವನಕ್ಕಾಗಿ ಜಾನ್ ಲೆನನ್ ಹೇಳಿದ 10 ಗುಟ್ಟುಗಳು
ಜಾನ್ ಲೆನನ್ ಒಬ್ಬ ಪಾಪ್ ಸಂಗೀತಗಾರ, ಆತ ಬೀಟಲ್ಸ್ ಎನ್ನುವ ಮ್ಯೂಸಿಕ್ ಬ್ಯಾಂಡ್ ಕಟ್ಟಿ ವಿಶ್ವವಿಖ್ಯಾತಿ ಪಡೆದವನು. ಲೆನನ್, ಪ್ರೀತಿಸಲು ಹಾಗೂ ಪ್ರೀತಿಸಲ್ಪಡಲು ಬೇಕಾದ 10 ಗುಟ್ಟುಗಳನ್ನು ಹೇಳಿದ್ದು, ಅವು ಹೀಗಿವೆ …. | ಸಂಗ್ರಹ ಮತ್ತು ಅನುವಾದ : ಪ್ರಣವ ಚೈತನ್ಯ ಪ್ರೀತಿ ಸಹಾಯ ಭರವಸೆ ಸ್ವಯಂ ಸಂತೋಷ ಶಾಂತಿ ಅಂತ್ಯ ಸಮಯ ತಪ್ಪು ಬದುಕು
ಕೋಪ ಬಂದಿದೆಯೇ? ಕನ್ನಡಿ ಮುಂದೆ ನಿಲ್ಲಿ!
ನಮಗೆ ಕೋಪ ಬಂದಾಗ ನಾವು ಮಾಡಬೇಕಾಗಿರುವುದು ಇಷ್ಟೆ, ಒಮ್ಮೆ ಕನ್ನಡಿಯ ಮುಂದೆ ಹೋಗಿ ನಮ್ಮನ್ನು ನಾವು ನೋಡಿಕೊಳ್ಳಬೇಕು, ಆಗ ನಾವು ಕೋಪದಿಂದ ಎಷ್ಟು ಮೂರ್ಖರಾಗಿದ್ದೇವೆ ಎಂದು ನಮಗೆ ತಿಳಿಯುತ್ತದೆ. ಹಾಗೇ ಒಮ್ಮೆ ನಗುವೂ ಬರುತ್ತದೆ. ಇದು ಸತ್ಯ….! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು ಮನುಷ್ಯನಿಗೆ ಎಲ್ಲಾ ತರಹದ ಬಾವನೆಗಳು ಇರುತ್ತವೆ, ಬಾವನೆಗಳೆಂದರೆ ಸಂತೋಷ, ಕೋಪ, ಹೊಟ್ಟೆಕಿಚ್ಚು, ಕೋಪ ಇತ್ಯಾದಿಗಳು. ಆದರೆ ಈ ಎಲ್ಲಾ ಬಾವನೆಗಳಲ್ಲಿ ಕೋಪ ಬಹಳ ವಿಷೇಶವಾದದು. ಕೋಪವು ಮನುಷ್ಯನಿಗೆ ದೇವರು ಕೊಟ್ಟ […]
ಮನುಷ್ಯ ಪ್ರಾಣಿಯೇ, ಮೃಗವೇ? ಎರಡರ ನಡುವೆ ವ್ಯತ್ಯಾಸವೇನು? : ಓಶೋ
ಒಂದು ನಾಯಿ, ಅದು ನಾಯಿಯಾಗಿಯೇ ಹುಟ್ಟುತ್ತದೆ, ನಾಯಿಯಾಗೇ ಬದುಕುತ್ತದೆ, ನಾಯಿಯಾಗಿಯೇ ಸಾಯುತ್ತದೆ. ಆದರೆ ಮನುಷ್ಯನು ಹಾಗಲ್ಲ, ಮನುಷ್ಯನು ಶಾಂತಿಯನ್ನು ಸೂಚಿಸುವ ಬುದ್ಧ ಬೇಕಾದರು ಆಗಬಲ್ಲ, ರಕ್ತಪಾತ ನಡೆಸಿದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕೂಡ ಆಗಬಲ್ಲ. ಮನುಷ್ಯನಿಗೆ ಇವೆರಡರಲ್ಲಿ ಯಾವುದು ಬೇಕಾದರೂ ಆಗುವ ಸಾಮರ್ಥ್ಯವಿದೆ. ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಎಲ್ಲಾದರು ಸಿಗಲು ಸಾದ್ಯವೆ? ~ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ನಿರೂಪಣೆ : ಪ್ರಣವ ಚೈತನ್ಯ ನಮ್ಮ ವಿಜ್ಞಾನವೇ ಹೇಳುವಂತೆ ಮನಯಷ್ಯನು ಒಂದು ಜಾತಿಯ […]
ರಾಮತೀರ್ಥರು ಹೇಳಿದ ರಣಜೀತ ಸಿಂಹನ ಕಥೆ ಮತ್ತು ನೀತಿ
“ನಾವೆಲ್ಲರೂ ಜೀವನವೆಂಬ ಅಟಕ್ ನದಿಯನ್ನು ದಾಟಲೇಬೇಕಾದ ಅನಿವಾರ್ಯತೆಯಲ್ಲಿ ಇರುವವರು. ಅನುಮಾನಿಸುತ್ತಾ ನಿಂತರೆ ಮುಳುಗಿಹೋಗುತ್ತೇವೆ, ರಣಜೀತ ಸಿಂಹ ಮತ್ತವನ ಸೇನೆಯಂತೆ ಮುನ್ನುಗ್ಗಿದ್ದರೆ, ನಮ್ಮನ್ನು ಮುಳುಗಿಸಬಲ್ಲ ನದಿಯೇ ಉಳಿಯುವುದಿಲ್ಲ!” ಇದು ಸ್ವಾಮಿ ರಾಮತೀರ್ಥರು ನೀಡಿದ ದೃಷ್ಟಾಂತದ ಅಂತರಾರ್ಥ ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು ಬಹಳ ಹಿಂದೆ ನಾರ್ವೆಯಲ್ಲಿ ಒಬ್ಬ ರಾಜನಿದ್ದ. ಈ ರಾಜ ತನ್ನ ಕೋಣೆಯಲ್ಲಿ ಒಂದು ಕೊಳವೆಯನ್ನು ನೇತು ಬಿಟ್ಟಿದ್ದನು, ಅದರ ತಳದಲ್ಲಿ ನೀರು ತುಂಬಿತ್ತು. ಅವನು ಒಂದು ಘೋಷಣೆಯನ್ನು ಹೊರಡಿಸಿದ. ಆ ಕೊಳವೆಯಲ್ಲಿದ್ದ ನೀರನ್ನು […]
ನಿಮ್ಮೊಳಗಿನ ಸೂರ್ಯಶಕ್ತಿಕಂಡುಕೊಳ್ಳಿ… : ಸ್ವಾಮಿ ರಾಮತೀರ್ಥ
ಸಂತರು ಧರಿಸುವ ಕಾವಿಯ ಬಣ್ಣವು ಉದಯಿಸುವ ಸೂರ್ಯನ ಬಣ್ಣವನ್ನು ಹೋಲಿಸುತ್ತದೆ. ಇದರ ಅರ್ಥ ಆ ಸಂತರು ತಮ್ಮ ಮನಸ್ಸು ಹಾಗು ದೇಹಗಳ ಆಸೆಯನ್ನು ತ್ಯಾಗ ಮಾಡಿ ತಮ್ಮ ಆತ್ಮದಲ್ಲಿ ಕುದಿಯುತ್ತಿರುಯ ಶಕ್ತಿಯನ್ನು ಕಂಡುಕೊಂಡಿದ್ದಾರೆ ಎಂದು ~ ಸ್ವಾ.ರಾಮತೀರ್ಥ |ಕನ್ನಡ ಸಾರಾಂಶ : ಪ್ರಣವ ಚೈತನ್ಯ, ಕಲಿಕೆಯ ಟಿಪ್ಪಣಿಗಳು ಸೂರ್ಯನೆಂದರೆ ಶಕ್ತಿ. ಈ ಪ್ರಪಂಚದಲ್ಲಿ ಎಲ್ಲಾ ಜೀವಿಗಳೂ ಬದುಕುತ್ತಿರುವುದೇ ಸೂರ್ಯನಿಂದ. ಸೂರ್ಯುನಿಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಇಲ್ಲ. ಹೊರಗೆ ಹೇಗೋ ಹಾಗೆಯೇ ನಮ್ಮೊಳಗೂ ಒಂದು ಸೂರ್ಯನಂತಹದೆ ಶಕ್ತಿ ಇರುತ್ತದೆ. […]