ಮೃತ್ತಿಕಾ ಇತ್ಯೇವ ಸತ್ಯಮ್ … : ದಿನಕ್ಕೊಂದು ಸುಭಾಷಿತ

ಅಂತರಂಗವಷ್ಟೆ ಸತ್ಯ, ಬಾಹ್ಯದ ತೋರುಗಾಣಿಕೆಯಲ್ಲ…. | ಇಂದಿನ ಸುಭಾಷಿತ

ಮೂಲದಲ್ಲಿ ಏನಿದೆಯೋ ಅದು ಮಾತ್ರವೇ ಸತ್ಯ. ರೂಪಾಕಾರಗಳು ಸತ್ಯವಲ್ಲ. ರೂಪಾಕಾರಗಳು ಭಗ್ನಗೊಳ್ಳಬಹುದು. ಕೃತಕವಾಗಿರಬಹುದು. ಸಾಂದರ್ಭಿಕವೂ ಆಗಿರಬಹುದು. ಆದ್ದರಿಂದ ಅವುಗಳ ಆಧಾರದ ಮೇಲೆ ಯಾವುದರ / ಯಾರ ಗುಣವನ್ನೂ ಅಳೆಯಲಾಗದು. ಆಯಾ ವ್ಯಕ್ತಿ / ವಸ್ತುಗಳ ಮೂಲ ಅರಿತರೆ, ಅವರನ್ನೂ ಯಥಾವತ್ತಾಗಿ ಅರಿಯುವುದು ಸುಲಭವಾಗುತ್ತದೆ.

ಮಣ್ಣಿನಿಂದ ಮಾಡಿದ ಗೊಂಬೆ / ಕುಂಭಗಳ ಆಕಾರ ಏನೇ ಇದ್ದರೂ ಯಾವ ಮಣ್ಣಿನಿಂದ ಮಾಡಿರುತ್ತಾರೆಯೋ ಅದರ ಮೇಲೆ ಅವುಗಳ ಗುಣಮಟ್ಟ ನಿರ್ಧಾರವಾಗುತ್ತದೆ. ಹಾಗೆಯೇ, ಹೊರಗು ಏನೇ ಇದ್ದರೂ ಅಂತರಂಗದಲ್ಲಿ ಏನಿದೆಯೋ ಅದೇ ಮುಖ್ಯವಾಗುತ್ತದೆ. ಅಂತರಂಗವಷ್ಟೆ ಸತ್ಯ, ಬಾಹ್ಯದ ತೋರುಗಾಣಿಕೆಯಲ್ಲ….

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.