ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ಅದು ಧಾರವಾಡದ ಕರ್ನಾಟಕ ಯುನಿವರ್ಸಿಟಿಯ ಇಂಗ್ಲಿಷ್ ಡಿಪಾರ್ಟಮೆಂಟ್ ನ ಸ್ಟಾಫ್ ರೂಂ. ಅಂದು ಅಲ್ಲಿದ್ದವರೆಲ್ಲ ಕನ್ನಡ ಸಾಹಿತ್ಯದ ಘಟಾನುಘಟಿಗಳು.ಶಾಂತಿನಾಥ ದೇಸಾಯಿ, ಶಂಕರ ಮೊಕಾಶಿ, ಗಿರಡ್ಡಿ ಗೋವಿಂದ ರಾಜ್ , ಚಂಪಾ ಮುಂತಾದವರು.
ಒಂದು ದಿವಸ ಚಂಪಾ ಅವಸರದಿಂದ ಸ್ಟಾಫ್ ರೂಂ ಗೆ ಬಂದು ಅಲ್ಲಿಟ್ಟಿದ್ದ ಪುಸ್ತಕಗಳ ರಾಶಿಯಲ್ಲಿ ಏನೋ ಹುಡುಕಲು ಶುರು ಮಾಡುತ್ತಾರೆ.
ಏನ್ರೀ ಸರ್ ಏನ್ ಹುಡಕ್ಲಿಕತ್ತೀರಿ ಅಂತ ಒಬ್ಬರು ಕೇಳಿದಾಗ, ಚಂಪಾ ಉತ್ತರ ……
” ಏನಿಲ್ಲ ನಮ್ಮ ಮೊಕಾಶಿಯವರು ನಾಕುತಂತಿ ಕವನ ಇಂಗ್ಲಿಷ್ ನ್ಯಾಗ ಅನುವಾದ ಮಾಡ್ಯಾರಂತ, ಕನ್ನಡದಾಗಂತೂ ತಿಳಿಲಿಲ್ಲ, ಇಂಗ್ಲಿಷ್ ನೊಳಗರ ತಿಳಿತದೇನೋ ಅಂತ ಹುಡುಕ್ತಿದ್ದೆ”.
ಇದು ಚಂಪಾ!

