ಧಾರವಾಡದಲ್ಲಿ ಕೇಳಿದ್ದು (ಬಹುಶಃ ಗಿರೀಶ್ ಕಾರ್ನಾಡರಿಂದ ?) ………| ಚಿದಂಬರ ನರೇಂದ್ರ
ಒಮ್ಮೆ ಇಬ್ಬರು ಸಾಹಿತ್ಯ ಪ್ರೇಮಿಗಳು ಪ್ರಸಿದ್ಧ ಸಂಶೋಧಕ ಶಂಬಾ ಅವರ ಮನೆಗೆ ಬರ್ತಾರೆ. ಮನೆಯ ಅಂಗಳದಲ್ಲೇ ಕುಳಿತಿದ್ದ ಶಂಬಾ ಅತಿಥಿಗಳನ್ನ ಸ್ವಾಗತ ಮಾಡುತ್ತ ಅವರಿಗೊಂದು ಪ್ರಶ್ನೆ ಕೇಳ್ತಾರೆ.
“ ಆ ಮನಿಗೆ ಹೋಗಿ ಬಂದ್ರೇನು?”
( ಆ ಮನಿ ಅಂದ್ರೆ ಬೇಂದ್ರೆಯವರ ಮನೆ. ಶಂಬಾ ಮತ್ತು ಬೇಂದ್ರೆ ಜಗಳ ಬಹಳ ಪ್ರಸಿದ್ಧವಾದದ್ದು)
“ ಹೌದ್ರಿ. ಆದ್ರ ನಿಮಗೆಂಗ ಗೊತ್ತಾತು ? “ ಅಂತ ಅತಿಥಿಗಳು ಶಂಬಾ ಅವರನ್ನ ತಿರುಗಿ ಪ್ರಶ್ನೆ ಮಾಡ್ತಾರ.
“ ನಿಮ್ಮ ಮೈಯಾಗಿಂದ ಕವಿತಾದ ವಾಸನಿ ಬರ್ಲಿಕತ್ತದ, ಅಷ್ಟ ಗೊತ್ತಾಗುದಿಲ್ಲೇನ ನನಗ ” ಶಂಬಾ ಕೊಟ್ಟ ಉತ್ತರ ಅತಿಥಿಗಳನ್ನ ಗಾಬರಿ ಮಾಡಿ ಬಿಡ್ತದ.

