ಆ ಧೋತರದ ವೃದ್ಧ ಮತ್ಯಾರೂ ಅಲ್ಲ… । Coffeehouse ಕತೆಗಳು

ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಯುವಕ ತನ್ನ ಮನೆಯ ಅಂಗಳದಲ್ಲಿ ಕೂತಿರ್ತಾನೆ. ಆಗಲೇ ಅಲ್ಲಿಗೆ ಒಬ್ಬ ವೃದ್ಧರ ಆಗಮನವಾಗುತ್ತದೆ. ಅವರು ಬಂದವರೇ ತಮ್ಮ ಜೋಳಿಗೆ ಬಿಚ್ಚಿ ಅದರಲ್ಲಿಯ ಪುಸ್ತಕಗಳನ್ನು ಹೊರತೆಗೆದು ಅವನ್ನು ಕೊಂಡುಕೊಳ್ಳುವಂತೆ ಯುವಕನನ್ನು ಕೇಳಿಕೊಳ್ಳುತ್ತಾರೆ.

ಆ ಯುವಕ ಕಠಿಣ ಮಾತುಗಳನ್ನಾಡಿ ಆ ವೃದ್ಧರನ್ನು ಮನೆಯಿಂದ ಹೊರಗೆ ಹಾಕಿಬಿಡುತ್ತಾನೆ. ಮನೆಯ ಹಿರಿಯರಿಗೆ ಈ ಸುದ್ದಿ ತಿಳಿದಾಗ ಅವರು ಆ ಯುವಕನನ್ನು ಬಯ್ದು ಆ ವೃದ್ಧರನ್ನು ಹುಡುಕಿಕೊಂಡು ಬರುವಂತೆ ಹೇಳುತ್ತಾರೆ.

ಯುವಕ, ವೃದ್ಧರನ್ನು ಹುಡುಕುತ್ತ ಊರೆಲ್ಲ ಅಲೆಯುತ್ತಾನೆ, ಅವರು ಕಣ್ಣಿಗೆ ಬೀಳುವುದೇ ಇಲ್ಲ. ಕೊನೆಗೆ ನಿರಾಶನಾಗಿ ಯುವಕ ಊರ ಹೊರಗಿನ ಝರಿಯ ಬಳಿ ಹೋದಾಗ ಅಲ್ಲಿ ಆ ವೃದ್ಧರು ತಾವು ಉಟ್ಟುಕೊಂಡಿದ್ದ ಧೋತರನ್ನು ಒಗೆದು ಒಣಗಲು ಹಾಕಿ ಅಲ್ಲಿಯೇ ಕುಳಿತಿರುತ್ತಾರೆ. ಯುವಕ ಅವರ ಬಳಿ ಹೋಗಿ ಕ್ಷಮೆ ಕೇಳಿ ಅವರನ್ನು ಮನೆಗೆ ಕರೆದುಕೊಂಡು ಬರುತ್ತಾನೆ.

ಮನೆ ಮನೆಗೆ ತಮ್ಮ ಜೋಳಗಿಯಲ್ಲಿ ಕನ್ನಡ ಪುಸ್ತಕಗಳನ್ನು ತುಂಬಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ಆ ಹಿರಿಯ ವ್ಯಕ್ತಿ ಬೇರಾರೂ ಅಲ್ಲ, ಅವರು ಕನ್ನಡದ ಧೀಮಂತರಲ್ಲೊಬ್ಬರಾದ ಗಳಗನಾಥರು. ಅವರನ್ನು ಮೊದಲು ಬಯ್ದು ನಂತರ ಹುಡುಕಾಡಿದ ವ್ಯಕ್ತಿಯೂ ಕನ್ನಡಿಗರಿಗೆ ಪರಿಚಿತರೇ. ಅವರು ಬೀಚಿ (?).

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.