ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ
ಬಹುತೇಕ ಮನುಷ್ಯರ ಸಿದ್ಧಾಂತಗಳು ಹೇಗೆ ಪರಿಸ್ಥಿತಿಗೆ ಅನುಸಾರವಾಗಿ ಬದಲಾಗುತ್ತವೆ ಎನ್ನುವುದನ್ನ ಸೂಚಿಸುವುದಕ್ಕೆ ಕಥಾ ಕೀರ್ತನಕಾರ್ತಿ ಜಯಾ ಕಿಶೋರಿ ತಮ್ಮ ಸಭಿಕರಿಗೆ ಒಂದು ಪ್ರಶ್ನೆ ಕೇಳುತ್ತಾರೆ…..
ನಿಮ್ಮ ಚಹಾದ ಕಪ್ಪಲ್ಲಿ ನೊಣ ಬಿದ್ದರೆ ಏನು ಮಾಡುತ್ತೀರಿ ?
ಚಹಾ ಎಸೆದು ಬಿಡುತ್ತೀರಿ ತಾನೆ?
ಅದೇ ನೋಣ ನಿಮ್ಮ ತುಪ್ಪದ ಡಬ್ಬದಲ್ಲಿ ಬಿದ್ದಿದ್ದರೆ ಏನು ಮಾಡುತ್ತಿದ್ದಿರಿ ? ಖಂಡಿತ ಆ ನೋಣ ತೆಗೆದು ಹೊರಗೆ ಬಿಸಾಕುತ್ತಿದ್ದಿರಿ. ಈಗ ಏನಾಯಿತು ನಿಮ್ಮ ಸಿದ್ಧಾಂತಕ್ಕೆ ?

