ಭಾವುಕರಿಲ್ಲವಾಗಿ ತಾರ್ಕಣೆ ಇಲ್ಲ : ಅಕ್ಕ ಮಹಾದೇವಿ #39

ಚೆನ್ನಮಲ್ಲಿಕಾರ್ಜುನನನ್ನು ಬೆರೆಸಿದ ಮೇಲೆ ಅರಿಯಬೇಕಾದ ಇನ್ನೊಂದು ನಿಜತತ್ವ ಅನ್ನುವುದು ಇದೆ ಎಂಬ ಮಾತೂ ಇಲ್ಲ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 4ನೀನೇ ನನ್ನ ಉಸಿರು

ತನುವ ಮೀರಿತ್ತು
ಮನವ ಮೀರಿತ್ತು
ಘನವ ಮೀರಿತ್ತು
ಅಲ್ಲಿಂದತ್ತ ಭಾವುಕರಿಲ್ಲವಾಗಿ ತಾರ್ಕಣೆಯಿಲ್ಲ
ಚೆನ್ನಮಲ್ಲಿಕಾರ್ಜುನಯ್ಯನ
ಬೆರಸಲಿಲ್ಲದ ನಿಜತತ್ವವು  ॥ ೨೨೪ ॥

[ಭಾವುಕ=ಭಾವಿಸುವವನು, ಭಾವದ ಪರಿಣಾಮಕ್ಕೆ ಒಳಗಾದ; ತಾರ್ಕಣೆ=ಅರಸುವಿಕೆ, ಹುಡುಕಾಟ, ಗ್ರಹಿಕೆ; ಬೆರಸಲಿಲ್ಲದ=ಒಂದಾಗಲು ಪ್ರತ್ಯೇಕವಾಗಿ ಬೇರೇನೂ ಇರದ]

ಆಗುತ್ತಿರುವುದನ್ನು  ಅನುಭವ ಅನ್ನಬಹುದಾದರೆ ಅದು ದೇಹ, ಮನಸ್ಸು, ಸಾಲಿಡ್‌ ಆದ ಅರ್ಥ ಎಲ್ಲವನ್ನೂ ಮೀರಿದ್ದು. ಇಲ್ಲಿಂದಾಚೆಗೆ ಭಾವನೆಗಳ ಪರಿಣಾಮವೂ ಇಲ್ಲ, ಭಾವುಕತೆಯೂ ಇಲ. ನನಗಿಂತ ಬೇರೆಯಾಗಿ ಇರುವ ಮತ್ತೇನನ್ನೋ ಗ್ರಹಿಸಬೇಕು ಅಂತಲೂ ಇಲ್ಲ. ಚೆನ್ನಮಲ್ಲಿಕಾರ್ಜುನನನ್ನು ಬೆರೆಸಿದ ಮೇಲೆ ಅರಿಯಬೇಕಾದ ಇನ್ನೊಂದು ನಿಜತತ್ವ ಅನ್ನುವುದು ಇದೆ ಎಂಬ ಮಾತೂ ಇಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.