ನನ್ನ ನಲ್ಲನ ಶೃಂಗಾರದ ಪರಿ ಬೇರೆ: ಅಕ್ಕ ಮಹಾದೇವಿ #69

ತಾನು ಮತ್ತು ತನ್ನ ಇಷ್ಟದೈವವನ್ನು ಪ್ರಿಯೆ-ಪ್ರಿಯಕರನನ್ನಾಗಿ ರೂಪಿಸಿಕೊಂಡ ಅಕ್ಕನ ವಚನಗಳು ದೈವದ ಸಾಕ್ಷಾತ್ಕಾರವನ್ನೂ ಅದೇ ಒಲವಿನ ರೂಪಕದ ಮೂಲಕ ಹೇಳಿಕೊಂಡಂತೆ ತೋರುತ್ತದೆ.~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ಎಲ್ಲರ ಗಂಡರ ಶೃಂಗಾರದ ಪರಿಯಲ್ಲ
ಎನ್ನ ನಲ್ಲನ ಶೃಂಗಾರದ ಪರಿ ಬೇರೆ.
ಶಿರದಲ್ಲಿ ಕಂಕಣ
ಉರದ ಮೇಲಂದುಗೆ
ಕಿವಿಯಲ್ಲಿ ಹಾವುಗೆ
ಉಭಯ ಸಿರಿವಂತನ ಮೊಳಕಾಲಲ್ಲಿ ಜಳವಟ್ಟಿಗೆ.
ಉಂಗುಟದಲ್ಲಿ ಮೂಕುತಿ 
ಇದು ಜಾಣರಿಗೆ ಜಗುಳಿಕೆ. ಚೆನ್ನಮಲ್ಲಿಕಾರ್ಜುನಯ್ಯನ
ಶೃಂಗಾರದ ಪರಿ ಬೇರೆ [೧೧೭]

[ಉರ=ಎದೆ; ಅಂದುಗೆ=ಕಾಲಂದುಗೆ; ಹಾವುಗೆ=ಮರದಪಾದರಕ್ಷೆ; ಜಳವಟ್ಟಿಗೆ=ಕಂಠಾಭರಣ; ಉಂಗುಟ=ಉಂಗುಷ್ಠ;  ಕಾಲಿನ ಹೆಬ್ಬೆರಳು; ಜಗುಳಿಕೆ=ಜಾರಿಕೆ]

ಈ ವಚನದ ಆರಂಭದಲ್ಲಿಯೇ ನನ್ನ ನಲ್ಲನ ಶೃಂಗಾರದ ಪರಿ ಬೇರೆ ಎಂದು ವಾಚ್ಯವಾಗಿ ಹೇಳಿ, [ನನ್ನ] ಉರದ ಮೇಲೆ [ಅವನ] ಅಂದುಗೆ. [ನನ್ನ] ಕಿವಿಯಲ್ಲಿ [ಅವನ] ಹಾವುಗೆ [ನನ್ನ] ಮೊಳಕಾಲಲ್ಲಿ [ಅವನ] ಕಂಠಾಭರಣ, [ಅವನ] ಉಂಗುಷ್ಠದಲ್ಲಿ ನನ್ನ ಮೂಗುತಿ ಎಂದು ವಿವರಗಳನ್ನು ಸೇರಿಸಿ, ಕೊನೆಯಲ್ಲಿ ಇದು ಅರ್ಥವಾಗಬೇಕಾದರೆ ಜಾಣರಾಗಿರಬೇಕು, ಜಾಣರನ್ನೂ ಜಾರಿ ಬೀಳಿಸುವ ಮಾತು  ಇದು ಅನ್ನುವ ಸವಾಲೂ ಇದೆ. ಹಾಗಾಗಿ ಈ  ವಚನ ಆನಂತರದಲ್ಲಿ ವಿಸ್ತಾರಗೊಂಡದ್ದು ಅನಿಸುತ್ತದೆ.

ತಾನು ಮತ್ತು ತನ್ನ ಇಷ್ಟದೈವವನ್ನು ಪ್ರಿಯೆ-ಪ್ರಿಯಕರನನ್ನಾಗಿ ರೂಪಿಸಿಕೊಂಡ ಅಕ್ಕನ ವಚನಗಳು ದೈವದ ಸಾಕ್ಷಾತ್ಕಾರವನ್ನೂ ಅದೇ ಒಲವಿನ ರೂಪಕದ ಮೂಲಕ ಹೇಳಿಕೊಂಡಂತೆ ತೋರುತ್ತದೆ. ಹೀಗೆ ಇಷ್ಟದೈವದೊಡನೆ ಒಂದಾದ ಬಗೆಯನ್ನು ಮಾತಿನ ರೂಪದಲ್ಲಿ ವ್ಯಕ್ತಗೊಳಿಸಿರು ವಚನಗಳು ತೀರ ಅಪರೂಪ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.