ಪ್ರತಿಯೊಂದು ಜೀವಪರ ತಿಳಿವೂ ಒಟ್ಟು ಮನುಷ್ಯರ ಕೊಡುಗೆ : ಬೆಳಗಿನ ಹೊಳಹು

“ಜ್ಞಾನ ಮಾನವೀಯತೆಗೆ ಸೇರಿದ್ದು. ಅದು ಯಾವುದೇ ದೇಶ – ಧರ್ಮಗಳಿಗೆ ಸೇರಿದ್ದಲ್ಲ…. “

louis

ಜ್ಞಾನಕ್ಕೆ ಗಡಿಗಳಿಲ್ಲ. ಅದು ಯಾವುದೇ ಸಂಪ್ರದಾಯ ಅಥವಾ ಪರಂಪರೆಗೆ ಒಳಪಡುವುದಿಲ್ಲ. ಸೃಷ್ಟಿಯಲ್ಲಿ ಸುಪ್ತವಾಗಿರುವ ತಿಳಿವನ್ನು ಕಂಡುಕೊಳ್ಳುವುದು ಜ್ಞಾನ. ಅದನ್ನು ಭೂಮಿಯ ಮೇಲಿನ ಯಾವ ಭಾಗದಲ್ಲಿ ನೆಲೆಸಿರುವ ಮನುಷ್ಯನೂ ಸಾಧಿಸಬಲ್ಲ. ತಾನು ಪಡೆದ ಜ್ಞಾನವನ್ನು ನಿರೂಪಿಸಿ ಅಥವಾ ಅನ್ವಯಗೊಳಿಸಿ ವಿತರಿಸುವುದು ವಿಜ್ಞಾನ. ಜ್ಞಾನ ವಿಜ್ಞಾನಗಳು ಇಡಿಯ ಮನುಕುಲದ ಆಸ್ತಿ.  ಆದ್ದರಿಂದ “ಇದು ನಮ್ಮದು” ಎಂದು ಬೀಗುವುದಾಗಲೀ “ಇದು ನಮ್ಮದು ಮಾತ್ರ” ಎಂದು ಮುದ್ರೆಯೊತ್ತುವುದಾಗಲೀ ಸರಿಯಲ್ಲ.

ಸಮುದಾಯದ ಆಸ್ತಿಗೆ ಹಣೆಪಟ್ಟಿ ಹಚ್ಚಿದ ಕೂಡಲೇ ಅದು ಸೀಮಿತಗೊಂಡುಬಿಡುತ್ತದೆ. ಮತ್ತೊಬ್ಬರಿಂದ ದೂರವಾಗಿಬಿಡುತ್ತದೆ. ಈ ಮೂಲಕ ನಾವು ಜ್ಞಾನಪ್ರಸಾರಕ್ಕೆ ತಡೆಯೊಡ್ಡಿದಂತೆ ಆಗಿಬಿಡುತ್ತದೆ. 

ಆದ್ದರಿಂದ, ಪ್ರತಿಯೊಂದು ಜೀವಪರ ತಿಳಿವನ್ನೂ ಒಟ್ಟು ಮನುಷ್ಯರ ಕೊಡುಗೆ ಎಂದೇ ತಿಳಿದು ಹಂಚೋಣ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.