ಶ್ರೀರಾಮನು ಭಕ್ತಶ್ರೇಷ್ಠನಾದ ಹನುಮನಿಗೆ ನೀಡಿದ ಉಪದೇಶಗಳು ‘ಶ್ರೀ ರಾಮ ಸೂಕ್ತಿ’ಯಲ್ಲಿ ಸಂಕಲನಗೊಂಡಿದೆ. ಅದರಿಂದ ಕೆಲವು ಹೊಳಹುಗಳು, ನಿಮಗಾಗಿ…
“ಪರಮಾತ್ಮನ ನೆರಳೇ ಎಲ್ಲ ಜೀವಿಗಳಲ್ಲಿ ಜೀವಾತ್ಮನಾಗಿ ಪ್ರತಿಬಿಂಬಿತವಾಗಿದೆ. ವಿಶಾಲವಾದ ಆಕಾಶವೇ ಎಲ್ಲ ನದಿ, ಸರೋವರಗಳಲ್ಲಿ ಪ್ರತಿಬಿಂಬಿಸುತ್ತದೆ”
~
ಶುದ್ಧವಾದ ಜ್ಞಾನವು ಎಲ್ಲ ಆಸೆ ಮತ್ತು ಆಸಕ್ತಿಗಳನ್ನು ಕೊಲ್ಲುತ್ದೆ. ಸಕಾಮಕರ್ಮ ಯಾವುದೇ ಆಗಿರಲಿ, ಅದನ್ನು ಬಿಡಬೇಕು. ಅದು ವ್ಯಕ್ತಿಯನ್ನು ಜನನ – ಮರಣದ ಸಂಕೋಲೆಯಲ್ಲಿ ಬಂಧಿಸುತ್ತದೆ. ನಿಜವಾದ ಜ್ಞಾನವನ್ನು ಹೊಂದಲು ಅದು ಅಡ್ಡಿಯಾಗುವುದು.
~
ಪಂಚಭೂತಗಳಿಂದ, ಅತ್ಯಂತ ಸೀಮಿತವೂ ನಾಶವುಳ್ಳದ್ದೂ ಆದ ದೇಹವು ಆತ್ಮನಿಗಿಂತ ಭಿನ್ನವಾಗಿದೆ. ಆತ್ಮವು ಆದ್ಯಂತರಹಿತವೂ, ಅವಿನಾಶಿಯೂ ಆಗಿದೆ. ಅದು ದೇಹವನ್ನು ಸೃಷ್ಟಿಸಿಕೊಳ್ಳುವುದು. ಇದನ್ನು ಚೆನ್ನಾಗಿ ಮನನ ಮಾಡಿಕೊಂಡು, ಆತ್ಮವನ್ನು ಅರಿಯಲೆತ್ನಿಸಬೇಕು.
~
ಸೂರ್ಯೋದಯವಾದಾಗ ಜನರು ತಾವು ದುಡಿದು ಸಂಪಾದಿಸಬಹುದೆಂದು ಉತ್ಸಾಹ ತಾಳುತ್ತಾರೆ. ಸೂರ್ಯಾಸ್ತದ ವೇಳೆಯಲ್ಲೂ ಅವರು ಆನಂದದಿಂದಲೇ ಇರುತ್ತಾರೆ. “ಅರೆ! ನನ್ನ ಜೀವನ ಮುಳುಗುತ್ತಿದೆ!!” ಎಂದು ಅವರು ಚಿಂತಾಕುಲರಾಗುವುದಿಲ್ಲ.
ಆಕರ : ಶ್ರೀರಾಮ ಸೂಕ್ತಿ | ಶ್ರೀರಾಮ ಹನುಮನಿಗೆ ನೀಡಿದ ಉಪದೇಶಗಳ ಸಂಗ್ರಹ