ನಾರದ ಪುರಾಣದಲ್ಲಿರುವ ದತ್ತಾತ್ರೇಯ ಸ್ತೋತ್ರದ ಪೂರ್ಣಪಾಠವನ್ನು ಕನ್ನಡ ಅರ್ಥ ಸಹಿತ ಇಲ್ಲಿ ನೀಡಲಾಗಿದೆ…
ದತ್ತಾತ್ರೇಯರು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಮೂರೂ ದೇವರುಗಳ ಒಟ್ಟಾಗಿನ ಅವತಾರ. ಅತ್ರಿ ಮುನಿಗಳ ಪತ್ನಿಯಾದ ಮಾತೆ ಅನಸೂಯ ದೇವಿಯಿಂದಾಗಿ ದತ್ತಾತ್ರೆಯರು ಅವತಾರ ತಾಳಿದರು.
ಪೌರಾಣಿಕ ಹಿನ್ನೆಲೆಯ ಪ್ರಕಾರ ನಾರದ ಮುನಿಗಳು ಸರಸ್ವತಿ ಲಕ್ಷ್ಮಿ ಹಾಗೂ ಪಾರ್ವತಿಯರಿಗೆ ಸತಿ ಅನಸೂಯಾ ದೇವಿಯು ಅವರೆಲ್ಲರಿಗಿಂತ ಶ್ರೇಷ್ಠಳೆಂದು ತಿಳಿಸಿ ಅವರ ಮನಸ್ಸುಗಳನ್ನು ಕೆಡಿಸಿದರು. ಇದರಿಂದ ಅಸೂಯೆಗೊಂಡ ಮೂರೂ ದೇವಿಯರು ತಮ್ಮ ಪತಿಯರನ್ನು ಅನಸೂಯಳ ಬಳಿಗೆ ಕಳುಹಿಸಿದರು. ಅವರುಗಳು ಬಂದು ಸತಿ ಅನಸೂಯಳನ್ನು ವಿವಸ್ತ್ರಳಾಗಿ ತಮಗೆ ಭಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದರು. ಆಗ ಅನಸೂಯಾ ದೇವಿಯು ಆ ಮೂವರನ್ನೂ ಸೇರಿಸಿ ಆಗತಾನೇ ಜನಿಸಿರುವ ಶಿಶುಗಳನ್ನಾಗಿ ಮಾಡಿದಳು. ಆ ಶಿಶುವೇ ದತ್ತಾತ್ರೇಯರು.
ಮತ್ತೊಂದು ಕಥನದ ಪ್ರಕಾರ ವಿಶ್ವವನ್ನು ನಳಯಾನಿಯ ಶಾಪದಿಂದ ರಕ್ಷಿಸಲು ತ್ರಿಮೂರ್ತಿಗಳನ್ನು ಅನಸೂಯಳ ಬಳಿಗೆ ಹೋಗಲು ಒತ್ತಾಯ ಮಾಡಲಾಯಿತು. ಅದರಂತೆ ಅನಸೂಯಳು ತ್ರಿಮೂರ್ತಿಗಳನ್ನು ತನ್ನ ಶಿಶುವಾಗಬೇಕೆಂದು ಆಶಿಸಿದಳು. ಈ ಶಿಶುವೇ ದತ್ತಾತ್ರೇಯ (ವಿಷ್ಣು) ದೂರ್ವಾಸ (ಶಿವ ) ಹಾಗೂ ಚಂದ್ರ (ಬ್ರಹ್ಮ ) ಗಳ ಸಮಾಗಮ. ಈ ಮೂರೂ ಶಿಶುಗಳು ಅಳತೊಡಗಿದಾಗ ಅನಸೂಯಾ ದೇವಿಯು ಮೂರೂ ಶಿಶುಗಳನ್ನು ಒಮ್ಮೆಲೇ ಎತ್ತಿಕೊಂಡಳು, ಕೂಡಲೇ ಮೂರೂ ಶಿಶುಗಳು ಒಂದೇ ಶಿಶುವಾಗಿ ಮಾರ್ಪಟ್ಟವು.
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಂ
ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ
ತಾತ್ಪರ್ಯ :
ಜಡೆಗಟ್ಟಿದ ಕೂದಲನ್ನುಳ್ಳ ಶ್ವೇತವರ್ಣದ ದಯಾಸಾಗರನಾದ ಮತ್ತು ಸರ್ವ ರೋಗಗಳನ್ನೂ ಗುಣಪಡಿಸುವ ದತ್ತಾತ್ರೇಯರಿಗೆ ನನ್ನ ನಮನಗಳು.
ನ್ಯಾಸಂ :
ಅಸ್ಯ ದತ್ತಾತ್ರೇಯ ಸ್ತೋತ್ರ ಮಂತ್ರಸ್ಯ ಭಗವಾನ್ ನಾರದ ಋಷಿಃ
ಅನುಷ್ಟುಪ್ ಛಂದ, ಶ್ರೀ ದತ್ತ ಪರಮಾತ್ಮ ದೇವತ
ಶ್ರೀದತ್ತ ಪ್ರೀತ್ಯರ್ಥೇ ಜಪೇ ವಿನಿಯೋಗಃ
ತಾತ್ಪರ್ಯ :
ದತ್ತಾತ್ರೇಯ ಸ್ತೋತ್ರಕ್ಕೆ ಸಂಬಂಧಿಸಿದ ಮುನಿಗಳು ದೇವರ್ಷಿ ನಾರದರು, ಇದು ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿದ್ದು ಇದು ದತ್ತಾತ್ರೇಯ ದೇವರನ್ನು ಸಂಬೋಧಿಸಲಾಗಿದೆ ಹಾಗೂ ಈ ಸ್ತೋತ್ರವನ್ನು ದತ್ತಾತ್ರೇಯರನ್ನು ಸಂತುಷ್ಟಿಗೊಳಿಸಲು ಪ್ರಾರ್ಥಿಸಲಾಗಿದೆ.
ಜಗದುತ್ಪತ್ತಿಕರ್ತ್ರೇ ಚ ಸ್ಥಿತಿಸಂಹಾರ ಹೇತವೇ
ಭವಪಾಶವಿಮುಕ್ತಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ವಿಶ್ವವನ್ನು ಸೃಷ್ಟಿಸಿದ ದತ್ತಾತ್ರೇಯರಿಗೆ ನಮನಗಳು ಮತ್ತು ವಿಶ್ವದ ರಕ್ಷಣೆ ಹಾಗೂ ವಿನಾಶಕ್ಕೆ ಕಾರಣರು ಹಾಗೂ ಇವರು ಕರ್ಮ ಬಂಧನದಿಂದ ನಮ್ಮನ್ನು ಬಿಡುಗಡೆಗೊಳಿಸುವರು.
ಜರಾಜನ್ಮವಿನಾಶಾಯ ದೇಹಶುದ್ಧಿಕರಾಯ ಚ
ದಿಗಂಬರದಯಾಮೂರ್ತೇ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ವೃದ್ಧಾಪ್ಯ ಹಾಗೂ ಪುನರ್ಜನ್ಮಗಳನ್ನು ನಾಶಪಡಿಸುವ ದತ್ತಾತ್ರೇಯರಿಗೆ ವಂದನೆಗಳು ಹಾಗೂ ನಮ್ಮ ದೇಹವನ್ನು ಶುದ್ಧೀಕರಿಸುವ ಮತ್ತು ಕರುಣಾಮಯಿ ಹಾಗೂ ಇವರು ದಿಕ್ಕುಗಳನ್ನೇ ವಸ್ತ್ರಗಳನ್ನಾಗಿ ಧರಿಸಿರುವರು.
ಕರ್ಪೂರಕಾಂತಿದೇಹಾಯ ಬ್ರಹ್ಮಮೂರ್ತಿಧರಾಯ ಚ
ವೇದಶಾಸ್ತ್ರಪರಿಜ್ಞಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ದೇಹವನ್ನೇ ಶುದ್ಧ ಕರ್ಪೂರದಂತೆ ಹೊಳೆಯುವಂತೆ ಇರುವ ದತ್ತಾತ್ರೇಯರಿಗೆ ನಮಸ್ಕಾರಗಳು, ಬ್ರಹ್ಮನ ರೂಪವನ್ನು ಹೊಂದಿರುವವರು, ವೇದ ಶಾಸ್ತ್ರಗಳಲ್ಲಿ ಪರಿಣತರು.
ಹ್ರಸ್ವದೀರ್ಘಕೃಶಸ್ಥೂಲ ನಾಮಗೋತ್ರ ವಿವರ್ಜಿತ
ಪಂಚಭೂತೈಕದೀಪ್ತಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಹಿರಿದು, ಕಿರಿದುಗಳಿಂದ ಬಿಡುಗಡೆ ಹೊಂದಿರುವ ದತ್ತಾತ್ರೇಯರಿಗೆ ಸಹಸ್ರ ಪ್ರಣಾಮಗಳು, ಅಲ್ಲದೇ ಸಣ್ಣದು, ದೊಡ್ಡದು, ಹೆಸರು, ವಂಶ ಹಾಗೂ ಪ್ರಕಾಶಗಳಾದ ಪಂಚಭೂತಗಳಿಂದ ಬಿಡುಗಡೆಗೊಂಡಿರುವರು.
ಯಜ್ಞಭೋಕ್ತೇ ಚ ಯಜ್ಞಾಯ ಯಜ್ಞರೂಪಧರಾಯ ಚ
ಯಜ್ಞಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಯಜ್ಞದ ಹವಿಸ್ಸನ್ನು ಸೇವಿಸುವ ಹಾಗೂ ತಾನೇ ಯಜ್ಞನಾಗಿರುವ ದತ್ತಾತ್ರೇಯರಿಗೆ ಪ್ರಣಾಮಗಳು, ಹಾಗೂ ಸ್ವತಃ ಯಜ್ಞರೂಪವನ್ನು ಹೊಂದುವ , ಯಜ್ಞವನ್ನು ಪ್ರೀತಿಸುವ ಮಹಾ ಋಷಿಗಳು ದತ್ತಾತ್ರೇಯರು.
ಆದೌ ಬ್ರಹ್ಮಾ ಮಧ್ಯೇ ವಿಷ್ಣುರಂತೇ ದೇವಃ ಸದಾಶಿವಃ
ಮೂರ್ತಿತ್ರಯಸ್ವರೂಪಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಪ್ರಾರಂಭದಲ್ಲಿ ಬ್ರಹ್ಮನು, ಮಧ್ಯದಲ್ಲಿ ವಿಷ್ಣುವು, ಹಾಗೂ ಕೊನೆಯಲ್ಲಿ ಸದಾಶಿವನು, ಉಳ್ಳ ಸುಂದರ ದೈವೀ ತ್ರಿಮೂರ್ತಿಗಳಿಂದ ಕೂಡಿದ ದತ್ತಾತ್ರೇಯರಿಗೆ ನನ್ನ ನಮನಗಳು.
ಭೋಗಾಲಯಾಯ ಭೋಗಾಯ ಯೋಗಯೋಗ್ಯಾಯ ಧಾರಿಣೇ
ಜಿತೇಂದ್ರಿಯಜಿತಜ್ಞಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಆನಂದದ ಮಂದಿರ, ಯಾರು ಆನಂದಿತರು, ಯಾರು ಯೋಗ ಪಟುವು, ಯಾರು ಇಂದ್ರಿಯಗಳನ್ನು ಜಯಿಸಿದ ಜ್ಞಾನಿಗಳೋ, ಆ ದತ್ತಾತ್ರೇಯರಿಗೆ ಸಹಸ್ರ ಪ್ರಣಾಮಗಳು.
ದಿಗಂಬರಾಯ ದಿವ್ಯಾಯ ದಿವ್ಯರೂಪಧರಾಯ ಚ
ಸದೋದಿತಪರಬ್ರಹ್ಮ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ದಿಕ್ಕುಗಳನ್ನೇ ವಸ್ತ್ರವನ್ನಾಗಿ ಧರಿಸಿರುವ , ದೈವೀ ಶಕ್ತಿಯುಳ್ಳ , ಯಾರು ದೈವೀರೂಪವನ್ನು ಕೊಡಬಲ್ಲರೋ, ಯಾರು ಸದಾ ಉದಯಿಸುತ್ತಿರುವ ದೈವೀ ಬ್ರಹ್ಮಮ್, ಆ ಮಹಾಮಹಿಮರಾದ ದತ್ತಾತ್ರೇಯರಿಗೆ ನನ್ನ ನಮಸ್ಕಾರಗಳು.
ಜಂಬೂದ್ವೀಪ ಮಹಾಕ್ಷೇತ್ರ ಮತಾಪುರನಿವಾಸಿನೇ
ಜಯಮಾನಸತಾಂ ದೇವ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಜಂಬೂದ್ವೀಪದ ಮಾತಾಪುರ ನಿವಾಸಿಯಾದ ದತ್ತಾತ್ರೇಯರಿಗೆ ನಮನಗಳು ಹಾಗೂ ಮನಸ್ಸುಗಳ ದೈವವಾದ ದತ್ತಮಹಾರಾಜರಿಗೆ ಜಯವಾಗಲಿ.
ಭಿಕ್ಷಾಟನಂ ಗೃಹೇ ಗ್ರಾಮೇ ಪಾತ್ರಂ ಹೇಮಮಯಂ ಕರೇ
ನಾನಾಸ್ವಾದಮಯೀ ಭಿಕ್ಷಾ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಹಳ್ಳಿಗಳಲ್ಲಿನ ಮನೆಗಳಿಂದ ಅನೇಕ ವಿಧದ ರುಚಿಗಳುಳ್ಳ ಭಿಕ್ಷೆಯನ್ನು ಬಂಗಾರದ ಪಾತ್ರೆಯಲ್ಲಿ ಪಡೆದುಕೊಂಡ ದತ್ತಾತ್ರೇಯರಿಗೆ ನಮನಗಳು.
ಬ್ರಹ್ಮಜ್ಞಾನಮಯೀ ಮುದ್ರಾ ವಸ್ತ್ರೇ ಚಾಕಾಶಭೂತಲೇ
ಪ್ರಜ್ಞಾನಘನಬೋಧಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಬ್ರಹ್ಮಜ್ಞಾನ ಮುದ್ರೆಯನ್ನು ಪ್ರಕಟಿಸುವ , ಹಾಗೂ ಯಾರ ವಸ್ತ್ರವು ಭೂಮಿ ಮತ್ತು ಆಕಾಶವೇ ಆಗಿದೆಯೋ , ಯಾರು ಪರಿಶುದ್ಧವಾದ ಜ್ಞಾನವನ್ನು ಮಾತ್ರ ಬೋಧಿಸುವರೋ, ಆ ದತ್ತಮಹಾರಾಜರಿಗೆ ಅನಂತಾನಂತ ವಂದನೆಗಳು.
ಅವಧೂತ ಸದಾನಂದ ಪರಬ್ರಹ್ಮಸ್ವರೂಪಿಣೇ
ವಿದೇಹದೇಹರೂಪಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಯಾರು ಅವಧೂತನೋ, ಯಾರಿಗೆ ದಿವ್ಯ ಬ್ರಹ್ಮನ ರೂಪವಿರುವುದೋ, ಮತ್ತು ಶರೀರ ರಹಿತ ಶರೀರ ರೂಪವಿರುವುದೋ, ಆ ದತ್ತಾತ್ರೇಯರಿಗೆ ನಮನಗಳು.
ಸತ್ಯರೂಪ ಸದಾಚಾರ ಸತ್ಯಧರ್ಮಪರಾಯಣ
ಸತ್ಯಾಶ್ರಯಪರೋಕ್ಷಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಯಾರಿಗೆ ಸತ್ಯ ರೂಪವಿರುವುದೋ, ಯಾರು ಒಳ್ಳೆಯ ವರ್ತನೆಯನ್ನೇ ಅನುಸರಿಸುವರೋ, ಯಾರು ನೈಜ ಧರ್ಮದ ಶಕ್ತಿಯುತ ಅನುಯಾಯಿಗಳೋ , ಮತ್ತು ಸಾಮಾನ್ಯವಾಗಿ ಯಾವಾಗಲೂ ಸತ್ಯವನ್ನೇ ಅವಲಂಬಿಸಿರುತ್ತಾರೋ, ಆ ದತ್ತಾತ್ರೇಯರಿಗೆ ನಮಸ್ಕಾರಗಳು.
ಶೂಲಹಸ್ತಗದಾಪಾಣೇ ವನಮಾಲಾಸುಕಂಧರ
ಯಜ್ಞಸೂತ್ರಧರಬ್ರಹ್ಮನ್ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಯಾರು ತಮ್ಮ ಹಸ್ತಗಳಲ್ಲಿ ಗದೆ ಹಾಗೂ ಶೂಲಗಳನ್ನು ಹಿಡಿದುಕೊಂಡಿರುವರೋ, ಯಾರು ಕಾಡಿನ ಸುವಾಸನಾಭರಿತ ಪುಷ್ಪಮಾಲೆಯನ್ನು ಧರಿಸಿರುವರೋ, ಮತ್ತು ಯಾರು ಬ್ರಹ್ಮ ಯಜ್ಞವನ್ನು ಸಂಘಟಿಸುತ್ತಾರೋ, ಆ ದತ್ತಮಹಾರಾಜರಿಗೆ ಪ್ರಣಾಮಗಳು.
ದತ್ತ ವಿದ್ಯಾಢ್ಯ ಲಕ್ಷ್ಮೀಶ ದತ್ತಸ್ವಾತ್ಮಸ್ವರೂಪಿಣೇ
ಗುಣನಿರ್ಗುಣರೂಪಾಯ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಯಾರು ಜ್ಞಾನವನ್ನು ಕರುಣಿಸುತ್ತಾರೋ ಯಾರು ಲಕ್ಷ್ಮಿಯ ಪತಿಯೋ ಯಾರು ಸ್ವಯಂ ಆತ್ಮಸ್ವರೂಪಿಯೋ ಯಾರು ಗುಣಗಳ ಹಾಗೂ ಗುಣರಹಿತ ಆಕಾರವನ್ನು ಹೊಂದಿರುವರೋ ಆ ದತ್ತಾತ್ರೇಯರಿಗೆ ಪ್ರಣಾಮಗಳು.
ಶತ್ರುನಾಶಕರಂ ಸ್ತೋತ್ರಂ ಜ್ಞಾನವಿಜ್ಞಾದಾಯಕಂ
ಸರ್ವಪಾಪಂ ಶಮಂ ಯಾತಿ ದತ್ತಾತ್ರೇಯ ನಮೋsಸ್ತುತೇ
ತಾತ್ಪರ್ಯ :
ಈ ಸ್ತೋತ್ರ ಪಾರಾಯಣವು ಶತ್ರು ನಾಶವನ್ನು ಮಾಡುತ್ತದೆ, ಧಾರ್ಮಿಕ ಮತ್ತು ವೈಜ್ಞಾನಿಕ ವಿವೇಚನೆಯನ್ನು ನೀಡುತ್ತದೆ, ಮತ್ತು ಎಲ್ಲ ಪಾಪಗಳನ್ನು ಪರಿಹರಿಸುತ್ತದೆ. ಆ ದತ್ತಾತ್ರೇಯರಿಗೆ ಸಹಸ್ರ ನಮನಗಳು.