ಮಹಾತ್ಮರ ಅಭಿಜಾತ ಗುಣಗಳಿವು… | ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಭರ್ತೃಹರಿಯ ಶತಕತ್ರಯದಿಂದ…

ವಿಪದಿ ಧೈರ್ಯಮ್ ಅಭ್ಯುದಯೇ ಕ್ಷಮಾ 
ಸದಸಿ ವಾಕ್ಪಟುತಾ ಯುಧಿ ವಿಕ್ರಮಃ
ಯಶಸಿ ಚ ಅಭಿರತಿಃ ವ್ಯಸನಮ್ ಶ್ರುತೌ
ಪ್ರಕೃತಿಸಿದ್ಧಮ್ ಇದಂ ಹಿ ಮಹಾತ್ಮನಾಮ್

ಅರ್ಥ: ವಿಪತ್ತು ಬಂದೆರಗಿದಾಗ ಧೈರ್ಯ, ಸಮೃದ್ಧಿಯಲ್ಲಿ ಕ್ಷಮೆ, ಸಭೆಯಲ್ಲಿ ಉತ್ತಮವಾಗಿ ಮಾತನಾಡುವ ಸಾಮರ್ಥ್ಯ, ಯಶಸ್ಸಿನಲ್ಲಿ ಮತ್ತಷ್ಟು ಜ್ಞಾನಾರ್ಜನೆಯ ಉತ್ಸಾಹ – ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಸಿರುತ್ತದೆ.

Leave a Reply