ಇದಕ್ಕಿಂತ ಅಚ್ಚರಿ ಏನಿದೆ!? : ಇಂದಿನ ಸುಭಾಷಿತ

ಇಂದಿನ ಸುಭಾಷಿತ ಮಹಾಭಾರತದಿಂದ…

ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಂ |
ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ || ಮಹಾಭಾರತ, ವನಪರ್ವ ||

“ಪ್ರತಿದಿನವೂ ಅಸಂಖ್ಯ ಪ್ರಾಣಿಗಳು ಯಮಪುರಿಗೆ ತೆರಳುತ್ತಲೇ ಇರುತ್ತವೆ. ಇದನ್ನು ನೋಡಿಯೂ ಉಳಿದವರು ತಾವು ಶಾಶ್ವತವಾಗಿರಬೇಕೆಂದು ಇಚ್ಛಿಸುತ್ತಾರೆ. ಲೋಕದಲ್ಲಿ ಇದಕ್ಕಿಂತ ಹೆಚ್ಚಿನ ಆಶ್ಚರ್ಯ ಯಾವುದಿದೆ?”

ಲೋಕದಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಯಾವುದು ಎಂದು ಯಕ್ಷ ಧರ್ಮರಾಯನ್ನ ಕೇಳಿದಾಗ ಅವನು ಕೊಡುವ ಉತ್ತರವಿದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.