ಖಲೀಲ್ ಗಿಬ್ರಾನನ ಕತೆಗಳು #32: ಮರಳಿನ ಮೇಲೆ ಬರೆದದ್ದು

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಕಡಲ ತೀರದಲ್ಲಿ ಇಬ್ಬರು ಮಾತಾಡುತ್ತಿದ್ದರು
ಒಬ್ಬಾತ ಹೇಳಿದ, ʻಬಹಳ ಹಿಂದೆ, ಭರತದ ಹೊತ್ತಿನಲ್ಲಿ ಮರಳ ಮೇಲೆ ಒಂದು ಸಾಲು ಬರೆದೆ. ಜನ ಈಗಲೂ ಅದನ್ನು ನೋಡುತ್ತಾರೆ, ಅಳಿಸಿ ಹೋಗದ ಹಾಗೆ ಹುಷಾರಾಗಿದ್ದಾರೆ,ʼ ಅಂದ.
ಇನ್ನೊಬ್ಬ ಹೇಳಿದ. ಕಡಲ ನೀರು ಇಳಿದಿರುವ ಹೊತ್ತಿನಲ್ಲ ನಾನೂ ಒಂದು ಸಾಲು ಬರೆದೆ. ಆಮೇಲೆ ಕಡಲ ಅಲೆಗಳು ಬಂದು ನಾನು ಬರೆದದ್ದನ್ನು ಒರೆಸಿಕೊಂಡು ಹೋದವು. ಇರಲಿ, ನೀನೇನು ಬರೆದಿದ್ದೆ?ʼ
ʻನಾನು ಅಂದರೆ ನಾನೇʼ ಅಂತ ಬರೆದಿದ್ದೆ. ನೀನೇನು ಬರೆದಿದ್ದೆ?ʼ ಅಂತ ಕೇಳಿದ.
ಆಗ ಇನ್ನೊಬ್ಬ, ʻಈ ಕಡಲಿನ ಒಂದು ಹನಿ ನಾನು,ʼ ಅಂತ ಬರೆದಿದ್ದೆ ಅಂದ ಇನ್ನೊಬ್ಬನು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.