ತಾವೋ ತಿಳಿವು #18 ~ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಜಾಣತನ ಮತ್ತು ಪೂಜನೀಯರಾಗೋ ಚಟ
ಸ್ವಲ್ಪ ಕಡಿಮೆ ಆದರೆ
ನೂರಾರು ಮಂದಿ
ಸಮಾಧಾನದಿಂದ ಉಸಿರಾಡಬಹುದು.

ನೈತಿಕತೆ ಮತ್ತು ನ್ಯಾಯಪರತೆ
ನಿಂತು ಹೋದರೆ
ಜನರಿಗೆ, ಮನೆ – ಕುಟುಂಬ
ಸ್ವಲ್ಪ ಹತ್ತಿರವಾಗಬಹುದು.

ಪ್ಲಾನ್ ಮತ್ತು ಪ್ರಾಫಿಟ್ ಗಳ
ಕಳವಳ ಮರೆತು ಹೋದರೆ
ಜನರು ಬಾಗಿಲು ತೆಗೆದು
ಅಂಜಿಕೆಯಿಲ್ಲದೇ ಓಡಾಡಬಹುದು.

ಈ ಮೂರು ನಿಯಮಗಳು ಸಾಕಾಗದೆ ಹೋದರೆ
ಒಮ್ಮೆ ಖಾದಿ ಸವರಿ
ಕತ್ತರಿಸದ ಕಟ್ಟಿಗೆ ಮುಟ್ಟಿನೋಡಿ
ಅಗತ್ಯಗಳು ಕಡಿಮೆಯಾಗಲಿ
ಬಯಕೆಗಳು ಖಾಲಿ ಆಗಲಿ
ಹಸಿವಾದಾಗ ತಿನ್ನಿ
ಬೆಳಕಾದಾಗ ಎಚ್ಚರವಾಗಿ.

ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ
ನಿರ್ಭಿಡೆಯಿಂದ ಬದುಕಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.