ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಜಾಣತನ ಮತ್ತು ಪೂಜನೀಯರಾಗೋ ಚಟ
ಸ್ವಲ್ಪ ಕಡಿಮೆ ಆದರೆ
ನೂರಾರು ಮಂದಿ
ಸಮಾಧಾನದಿಂದ ಉಸಿರಾಡಬಹುದು.
ನೈತಿಕತೆ ಮತ್ತು ನ್ಯಾಯಪರತೆ
ನಿಂತು ಹೋದರೆ
ಜನರಿಗೆ, ಮನೆ – ಕುಟುಂಬ
ಸ್ವಲ್ಪ ಹತ್ತಿರವಾಗಬಹುದು.
ಪ್ಲಾನ್ ಮತ್ತು ಪ್ರಾಫಿಟ್ ಗಳ
ಕಳವಳ ಮರೆತು ಹೋದರೆ
ಜನರು ಬಾಗಿಲು ತೆಗೆದು
ಅಂಜಿಕೆಯಿಲ್ಲದೇ ಓಡಾಡಬಹುದು.
ಈ ಮೂರು ನಿಯಮಗಳು ಸಾಕಾಗದೆ ಹೋದರೆ
ಒಮ್ಮೆ ಖಾದಿ ಸವರಿ
ಕತ್ತರಿಸದ ಕಟ್ಟಿಗೆ ಮುಟ್ಟಿನೋಡಿ
ಅಗತ್ಯಗಳು ಕಡಿಮೆಯಾಗಲಿ
ಬಯಕೆಗಳು ಖಾಲಿ ಆಗಲಿ
ಹಸಿವಾದಾಗ ತಿನ್ನಿ
ಬೆಳಕಾದಾಗ ಎಚ್ಚರವಾಗಿ.
ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ
ನಿರ್ಭಿಡೆಯಿಂದ ಬದುಕಿ.