ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ
ಜಗತ್ತಿನ ಎಲ್ಲವೂ
ಬದಲಾಗುತ್ತಲೇ ಇರುತ್ತವೆ
ಎನ್ನುವುದು ಮನವರಿಕೆಯಾದಾಗ
ಯಾರೂ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ.
ಸಾವಿನ ಭಯ ಇಲ್ಲದೇ ಹೋದಾಗ
ಯಾವುದೂ ಅಸಾಧ್ಯ ಅನಿಸುವುದಿಲ್ಲ.
ಮುಂದಿನ ಆಗು ಹೋಗುಗಳನ್ನು
ಅಂಕೆಯಲ್ಲಿಡಲು ಹವಣಿಸುವುದು
ಪ್ರಧಾನ ಬಡಗಿಯ ಸ್ಥಾನದ ಮೇಲೆ ಕಣ್ಣು ಹಾಕಿದಂತೆ.
ನೆನಪಿರಲಿ, ಅವನ ಉಳಿಯ ಮುಟ್ಟಿದವರೆಲ್ಲ
ಬೆರಳು ಕತ್ತರಿಸಿಕೊಂಡಿದ್ದಾರೆ!