ತಾವೋ ತಿಳಿವು #72 ~ ಪ್ರಯತ್ನ ಯಾವಾಗಲೂ ರಹಸ್ಯವಾಗಿರಲಿ…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ

ಕುಗ್ಗಿಸಿ ಹಿಡಿಯಾಗಿಸಬೇಕೆಂದರೆ
ಮೊದಲು ಹಿಗ್ಗಿ, ಬೆಳೆದು, ವಿಸ್ತಾರವಾಗಲಿ.

ಬಾಡಿ, ಬಿದ್ದು ನಾಶವಾಗಬೇಕೆಂದರೆ
ಮೊದಲು ಬೆಳೆದು ಅರಳಿ, ಹೂವಾಗಲಿ.

ಬಯಸಿ ಗೆದ್ದು, ಕೈವಶವಾಗಬೇಕೆಂದರೆ
ಮೊದಲು, ಸೋತು, ಕರಗಿ, ಶರಣಾಗಲಿ.

ಇದೇ ಸೂಕ್ಷ್ಮ ತಾವೋ ತಿಳಿವು.

ವಿನಯ ಕಠೋರತೆಯ ಮೇಲೆ ಸವಾರಿ ಮಾಡಿದರೆ
ನಿಧಾನ, ವೇಗವನ್ನು ಹಿಂದೆ ಹಾಕುತ್ತದೆ.

ಪ್ರಯತ್ನ ಯಾವಾಗಲೂ ರಹಸ್ಯವಾಗಿರಲಿ
ಬೆಳೆದ ಫಸಲು ಮಾತ್ರ ಜನರಿಗೆ ಕಾಣಿಸಲಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.