ಭಾರತದ ಕೆಲವು ಜನಪ್ರಿಯ ತೀರ್ಥಕ್ಷೇತ್ರಗಳ ಮಾಹಿತಿ, ಐತಿಹ್ಯ ಮತ್ತು ಪ್ರಯಾಣದ ಕಿರು ಮಾಹಿತಿ ಇಲ್ಲಿದೆ…
ಮಾನಸ ಸರೋವರ
ಭಾರತ ಚೀನ ಗಡಿಯಲ್ಲಿರುವ ಈ ನದಿ ಸಿಹಿನೀರಿನಿಂದ ಕೂಡಿದ ಅತ್ಯಂತ ದೊಡ್ಡ ಸರೋವರವಾಗಿದೆ. ನದಿಯಾಗಿದೆ. ಹಿಂದೂ, ಬೌದ್ಧ , ಜೈನ ಧರ್ಮದ ಪವಿತ್ರ ತಾಣ.
ಐತಿಹ್ಯ
ಈ ಸರೋವರವು ಬ್ರಹ್ಮನ ಮನಸ್ಸಿನಲ್ಲಿ ಮೊದಲು ರಚಿತವಾಗಿದ್ದರಿಂದ ಇದಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಬ್ರಹ್ಮನ ಮನಸ್ಸಿನಲ್ಲಿ ಸೃಷ್ಟಿಯಾದ ಈ ಸರೋವರ ನಂತರ ಭೂಮಿ ಮೇಲೆ ಘಟಿಸಿತು ಎಂದು ಹೇಳಲಾಗುತ್ತದೆ. ಈ ನದಿ ನೀರು ಕುಡಿದವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಯಾವಾಗ ಪ್ರಯಾಣ
ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿಗೆ ಹೋಗಬಹುದು. ಆದರೆ, ಇದಕ್ಕೆ ಚೀನಾ ಸರಕಾರದ ಪೂರ್ವಾನುಮತಿ ಪಡೆದುಕೊಳ್ಳಬೇಕು.
ಅಮರನಾಥ
ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಹಿಮಲಿಂಗರೂಪಿ ಅಮರನಾಥನ ದರ್ಶನ ಪ್ರಮುಖ ಯಾತ್ರಾ ಸ್ಥಳ.
ಐತಿಹ್ಯ:
ಗುಹೆಯೊಳಗೆ ಉದ್ಭವ ಹಿಮಲಿಂಗ ಇಲ್ಲಿನ ವಿಶೇಷ ಪ್ರಕೃತಿ ದತ್ತವಾದ ಈ ಸಂರಚನೆ 5 ಸಾವಿರ ವರ್ಷಗಳಿಂದ ಅನೂಚಾನವಾಗಿದೆ. ಶಿವನನ್ನು ಪ್ರತಿನಿಧಿಸುವ ಹಿಮಲಿಂಗದೊಂದಿಗೆ ಎರಡು ಸಣ್ಣ ಹಿಮಲಿಂಗಗಳೂ, ಇದ್ದು ಅದು ಪಾರ್ವತಿ ಮತ್ತು ಗಣೇಶ ಎಂದು ನಂಬಲಾಗುತ್ತಿದೆ. ಅಮರನಾಥದ ಬಗ್ಗೆ ಕಲ್ಹಣನ ರಾಜತರಂಗಿಣಿ, ಮುಂತಾದ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಶಂಕರಾಚಾರ್ಯರು ಇಲ್ಲಿಗೆ ಭೇಟಿ ನೀಡಿದ್ದರೆಂಬ ಐತಿಹ್ಯವಿದೆ.
ಯಾವಾಗ ಪ್ರಯಾಣ:
ಅಮರನಾಥ ಯಾತ್ರೆ ಶ್ರಾವಣ ಮಾಸದಲ್ಲಿ ಅಂದರೆ ಜೂನ್ನಿಂದ ಆಗಸ್ಟ್ ಮಧ್ಯದ ವರೆಗೂ ಆಯೋಜಿಸಲಾಗುತ್ತದೆ. ಶ್ರೀ ಅಮರನಾಥ ಯಾತ್ರಾ ಟ್ರಸ್ಟ್ ಮತ್ತು ಜಮ್ಮು ಮತ್ತು ಕಾಶ್ಮೀರ ಸರಕಾರ ಈ ಯಾತ್ರೆಯನ್ನು ಆಯೋಜಿಸುತ್ತದೆ. ಅಮರನಾಥಕ್ಕೆ ಹೋಗುವವರು ಮೊದಲು ಜಮ್ಮು ಕಾಶ್ಮೀರದ ಬ್ಯಾಂಕ್ನಲ್ಲಿ ಪರವಾನಗಿ ಪಡೆಯಬೇಕು. ಇದು ಕರ್ನಾಟಕದ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಬ್ಯಾಂಕ್ ಇದೆ.
ಹೇಗೆ ಪ್ರಯಾಣ:
ದೇಹದಲ್ಲಿ ಶಕ್ತಿ ಇರುವವರು ಮಾತ್ರ ಹಿಮಚ್ಚಾದಿತ ಶಿಖರಗಳನ್ನು ಏರಿ ಹೋಗಬಹುದು, ಇಲ್ಲವಾದರೆ ಹೆಲಿಕಾಪ್ಟರ್, ಕುದುರೆಗಳು ಅಥವಾ ಡೋಲಿಗಳ ಸೇವೆ ಇರುತ್ತದೆ. ಯಾತ್ರಿಗಳು ಹೆಚ್ಚಾದಲ್ಲಿ ಮಾತ್ರ ಹೆಲಿಕಾಪ್ಟರ್ ಸೌಲಭ್ಯ ನೀಡಲಾಗುತ್ತದೆ. ಅಮರನಾಥ ಗುಹೆಯನ್ನು ತಲುಪಲು ದೆಹಲಿಯಿಂದ ಸುಮಾರು 650ಕಿ.ಮೀ ದೂರದ ಜಮ್ಮುವಿಗೆ ಬಂದೇ ಹೋಗಬೇಕು.
ಬದರೀನಾಥ
ಚಾರ್ಧಾಮ್ಗಳಲ್ಲಿ ಒಂದಾದ ಬದರೀನಾಥ ಉತ್ತರಖಂಡದ ಚಮೋಲಿಯಲ್ಲಿದೆ. ನರ ಮತ್ತು ನಾರಾಯಣ ಎಂಬ ಎರಡು ಶಿರಗಳ ನಡುವೆ ಈ ಕ್ಷೇತ್ರ ಇದೆ. ಬದರಿನಾಥ ದೇವಾಲಯವು ಅಲಕಾನಂದ ನದಿ ದಂಡೆ ಮೇಲಿದೆ. ಆದಿ ಶಂಕರಚಾರ್ಯರು ಈ ಸ್ಥಳವನ್ನು ಒಂದು ಪ್ರಮುಖ ತೀರ್ಥಕ್ಷೇತ್ರವನ್ನಾಗಿಸಿದರು.
ಐತಿಹ್ಯ
ಭಗವಾನ್ ವಿಷ್ಣು ತನ್ನ ಅವತಾರಗಳಾದ ನರ ಮತ್ತು ನಾರಾಯಣ ಋಷಿಗಳ ರೂಪದಲ್ಲಿ ನೆಲೆಸಿದ್ದು, ಯುಗಾಂತರಗಳಿಂದ ತಪಸ್ಸಿನಲ್ಲಿದ್ದಾನೆ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಬದರಿನಾಥ ಕ್ಷೇತ್ರವು ವರ್ಷದಲ್ಲಿ ಕೇವಲ ಆರು ತಿಂಗಳು ಮಾತ್ರ ದೇವಾಲಯ ತೆರೆದಿರುತ್ತದೆ.
ಯಾವಾಗ ಪ್ರಯಾಣ:
ಸಾಮಾನ್ಯವಾಗಿ ಜೂನ್ನಿಂದ ಸೆಪ್ಟಂಬರ್ವರೆಗೆ ಬದರಿನಾಥ ಕ್ಷೇತ್ರ ದರ್ಶನಕ್ಕೆ ಉತ್ತಮ ಸಮಯ. ಪಾಂಡವರು ಈ ಮಾರ್ಗವಾಗಿ ಸ್ವರ್ಗಕ್ಕೆ ಪ್ರಯಾಣ ಮಾಡಿದ್ದರೆಂಬ ಪ್ರತೀತಿ ಇದೆ.
ಕೇದಾರ ನಾಥ
ಉತ್ತರಾಖಂಡದಲ್ಲಿರುವ ಈ ಕ್ಷೇತ್ರ ಕೇದಾರನಾಥ ದೇವಾಲಯದಿಂದ ಪ್ರಸಿದ್ಧಿ ಪಡೆದಿದೆ.
ಐತಿಹ್ಯ
ಕೇದರನಾಥ ಮತ್ತು ಇಲ್ಲಿನ ದೇವಾಲಯ ಮಹಾಭಾರತದ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂಬ ನಂಬಿಕೆ ಇದೆ. ಪಾಂಡವರು ತಮ್ಮ ಪಾಪವನ್ನು ಕಳೆಯಬೇಕೆಂದು ಇಲ್ಲಿನ ಕೇದರನಾಥನನ್ನು ಪ್ರಾರ್ಥಿಸುತ್ತಿದ್ದರೆಂಬ ಪ್ರತೀತಿ ಇದೆ.
ಯಾವಾಗ ಪ್ರಯಾಣ
ಅಕ್ಷಯ ತೃತಿಯ ದಿನದಂದು ಈ ದೇವಾಲಯವನ್ನು ತೆರೆಯುವುದರಿಂದ ಏಪ್ರಿಲ್ ಕೊನೆ ವಾರ ಅಥವಾ ಮೇ ಮೊದಲ ವಾರದದಿಂದ ಅಕ್ಟೋಬರ್ ಕೊನೇ ವಾರದವರೆಗೂ ದೇವಾಲಯ ತೆರೆದಿರುತ್ತದೆ. 6ತಿಂಗಳು ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ.
ಯಮುನೋತ್ರಿ
ಯಮುನ ನದಿಯ ಉಗಮಸ್ಥಾನವಾದ ಯಮುನೋತ್ರಿ ಹಿಮಾಲಯದ ಚಾರ್ಧಾಮಗಳಲ್ಲಿ ಒಂದಾಗಿದೆ. ಯಮುನೋತ್ರಿ ದೇವಾಲಯವು ಗಡ್ವಾಲ್ ಹಿಮಾಲಯದ ಪಶ್ಚಿಮದಲ್ಲಿ ನೆಲೆಗೊಂಡಿದೆ. ಯಮ ಮತ್ತು ಯುಮುನೆಯ ಮೂರ್ತಿಯನ್ನು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಐತಿಹ್ಯ
ಈ ದೇವಾಲಯವು ಮೂಲತಃ ಜೈಪುರದ ರಾಣಿ ಗುಲೇರಿಯಾಳಿಂದ 19ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತ್ತು.
ಯಾವಾಗ ಪ್ರಯಾಣ:
ಈ ದೇವಾಲಯವು ಅಕ್ಷಯ ತೃತೀಯ ದಿನದಂದು ತೆರೆಯಲ್ಪಡುತ್ತದೆ. ದೀಪಾವಳಿ ನಂತರದ ಮುಚ್ಚಲಾಗುತ್ತದೆ. ಈ ಕ್ಷೇತ್ರವು ಆರು ತಿಂಗಳು ಹಿಮದಿಂದ ಆವೃತವಾಗಿರುತ್ತದೆ.
ಹರಿದ್ವಾರ
ಹಿಂದೂ ಪುಣ್ಯಕೇತ್ರಗಳಲ್ಲಿ ಒಂದಾದ ಈ ಕ್ಷೇತ್ರವು ಉತ್ತರಾಖಂಡ ರಾಜ್ಯದಲ್ಲಿದೆ.
ಐತಿಹ್ಯ:
ಸಮುದ್ರ ಮಂಥನದ ಸಮಯದಲ್ಲಿ ಅಮೃತದಿಂದ ಮೂಡಿದ ಹನಿಯಿಂದ ನಿರ್ಮಿತವಾದ ಕ್ಷೇತ್ರ ಎನ್ನಲಾಗಿದೆ.
ಯಾವಾಗ ಪ್ರಯಾಣ:
ಈ ಕ್ಷೇತ್ರಕ್ಕೆ ವರ್ಷದ ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಕುಂಭ ಮೇಳ ಬಹಳಷ್ಟು ಭಕ್ತರನ್ನು ಆಕರ್ಷಿಸುತ್ತದೆ. 12 ವರ್ಷಕ್ಕೊಮ್ಮ ಇಲ್ಲಿ ಮಹಾಕುಂಭಮೇಳ ನಡೆಯುತ್ತದೆ.
ಕಾಶಿ
ಕಾಶಿ ನಗರಿಯು ಭಾರತದ ಅತ್ಯಂತ ಪ್ರಾಚೀನವಾದ ಸಾಂಸ್ಕೃತಿಕ ನಗರಿ. ಗಂಗ ನದಿಯ ತಪ್ಪಲಲ್ಲಿದೆ.
ಐತಿಹ್ಯ
ಸಾಮಾನ್ಯವಾಗಿ ಹಿಂದೂಗಳಿಗೆ ತಮ್ಮ ಜೀವನದಲ್ಲಿ ಒಮ್ಮೆಯಾದರು ಕಾಶಿ ನೋಡುವುದರಿಂದ ಜನ್ಮ ಸಾರ್ಥಕವಾಗಿ ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಯಾವಾಗ ಪ್ರಯಾಣ:
ವರ್ಷ ಪೂರ್ತಿ ನೀವು ಇಲ್ಲಿಗೆ ಹೋಗಬಹುದು.
ಶಬರಿಮಲೈ
ಕೇರಳದ ಪಟ್ಟಾನ್ತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೈ ಹಿಂದೂಗಳ ಪವಿತ್ರ ಸ್ಥಳ. ವರ್ಷಕ್ಕೊಮ್ಮೆ ಭಕ್ತರು ಇಲ್ಲಿಗೆ ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ.
ಐತಿಹ್ಯ:
ಮಹಿಷಿಯನ್ನು ಕೊಂದ ನಂತರ ಅಯ್ಯಪ್ಪಸ್ವಾಮಿ ಈ ಬೆಟ್ಟದಲ್ಲಿ ಬಂದು ನೆಲೆಸಿದ ಎಂಬ ಐತಿಹ್ಯ ಇದೆ.
ಯಾವಾಗ ಪ್ರಯಾಣ
ಮಂಡಲಪೂಜೆ ನಡೆಯುವ ನವೆಂಬರ್ 15ರಿಂದ ಡಿಸೆಂಬರ್ 26ರ ವರೆಗೂ, ನಂತರ ಮಕರ ಸಂಕ್ರಾಂತಿ ಅವಧಿಯಲ್ಲಿ ಇಲ್ಲಿಗೆ ಹೆಚ್ಚಾಗಿ ಭಕ್ತರು ವ್ರತಧಾರಿಗಳಾಗಿ ಭೇಟಿ ನೀಡುತ್ತಾರೆ
ತಿರುವಣ್ಣಾಮಲೈ
ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅಣ್ಣಾಮಲೈ ಶಿಖರದ ಮೇಲೆ ಈ ದೇವಾಲಯವಿದೆ.
ಐತಿಹ್ಯ:
ಒಮ್ಮೆ ಪಾರ್ವತಿಯು ಆಟವಾಡುವಾಗ ಶಿವನ ಕಣ್ಣುಗಳನ್ನು ಮುಚ್ಚಿದ್ದರಿಂದ ವಿಶ್ವವೆಲ್ಲ ಕತ್ತಲಲ್ಲಿ ಮುಳುಗಿತು. ಇದರಿಂದ ಕೋಪಗೊಂಡ ಶಿವನು ಬೆಳಕಿನ ರೂಪದಲ್ಲಿ ಈ ಅಣ್ಣಾಮಲೈ ಬೆಟ್ಟದ ಮೇಲೆ ಕಾಣಿಸಿಕೊಂಡು ಬೆಳಕು ನೀಡಿದ ಎಂಬ ಪ್ರತೀತಿ ಇದೆ.
ಯಾವಾಗ ಪ್ರಯಾಣ:
ನವೆಂಬರ್ನಿಂದ ಡಿಸೆಂಬರ್ವರೆಗಿನ ಹುಣ್ಣಿಮೆಯ ದಿನದಂದು ನಡೆಯುವ ಕಾರ್ತಿಕ ದೀಪೋತ್ಸವವನ್ನು ನೋಡಲು ಅನೇಕ ಭಕ್ತರು ಇಲ್ಲಿಗೆ ಬೇಟಿ ನೀಡುತ್ತಾರೆ. ಆ ಸಮಯದಲ್ಲಿ ಇಲ್ಲಿಗೆ ಪ್ರಯಾಣ ಬೆಳೆಸುವುದು ಉತ್ತಮ.