“ನೀನು ಹೇಗೆ ಬರುತ್ತೀಯೋ ನಾನು ಅದಕ್ಕೆ ತಕ್ಕಂತೆ ನಿನ್ನನ್ನು ಎದುರುಗೊಳ್ಳುತ್ತೇನೆ, ನನ್ನಲ್ಲಿ ಹೊತ್ತುಕೊಳ್ಳುತ್ತೇನೆ” ಎಂಬುದು ಈ ವಚನದ ಸರಳ ವಿವರಣೆ.

ನಾನು ಜ್ಞಾನವೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನು ನಾಟ್ಯಕ್ಕೆ ನಿ೦ದಲ್ಲಿ
ನಾನು ಚೈತನ್ಯವೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನೆನ್ನ ಭವವ ಕೊ೦ದಿಹೆನೆ೦ದು
ಜ೦ಗಮ-ಲಾ೦ಛನನಾಗಿ ಬ೦ದಲ್ಲಿ
ನಾನು ಭಕ್ತನೆ೦ಬ ವಾಹನನಾಗಿರ್ದೆ
ಕಾಣಾ ಕೂಡಲಸ೦ಗಮದೇವಾ!!
~ ಬಸವಣ್ಣ
“ಭಗವಂತನು ನಿರಾಕಾರ ಸ್ಥಿತಿಯಲ್ಲಿದ್ದಾಗ ತಾನು ಜ್ಞಾನದ ಮೂಲಕ ದೇವರನ್ನು ಕೊಂಡೊಯ್ದು ಎಲ್ಲರನ್ನು ಬೆಸೆಯುವಂತೆ ಮಾಡುತ್ತೇನೆ; ನಟರಾಜನಾದ ಶಿವನು ನಾಟ್ಯಕ್ಕೆ ನಿಂತಾಗ ತಾನು ಆ ನೃತ್ಯಕ್ಕೆ ಚೈತನ್ಯವನ್ನು ತುಂಬುತ್ತೇನೆ; ಭಗವಂತನು ಸಾಕಾರಿಯಾದಾಗ (ಆಕಾರ ರೂಪ ತಾಳಿದಾಗ) ನಂದಿಯಾಗಿ ತಮ್ಮನ್ನು ಕರೆದೊಯ್ಯುತ್ತೇನೆ; ಜ೦ಗಮ ಲಾ೦ಛನನಾಗಿ ಬ೦ದಲ್ಲಿ, ನಿನ್ನ ಭಕ್ತನಾಗಿ ನಿನ್ನನ್ನು ಹೊತ್ತೊಯ್ಯುತ್ತೇನೆ ” ಎಂದು ಬಸವಣ್ಣ ಈ ವಚನದಲ್ಲಿ ಹೇಳುತ್ತಿದ್ದಾರೆ.
ಅಸೀಮ ರೂಪಿ ಭಗವಂತನ ಅನಂತ ಸಾಧ್ಯತೆಗಳನ್ನೂ, ಅವಕ್ಕೆ ತಾವು ಸ್ಪಂದಿಸುವ ಬಗೆಯನ್ನೂ; ಆ ಮೂಲಕ ಭಗವಂತನೊಡನೆ ಅವಿನಾಭಾವ ಸಂಬಂಧ ಸ್ಥಾಪಿಸಿಕೊಳ್ಳುವ ಬಗೆಯನ್ನೂ ಬಸವಣ್ಣನವರು ಇಲ್ಲಿ ತಿಳಿಸುತ್ತಿದ್ದಾರೆ. “ನೀನು ಹೇಗೆ ಬರುತ್ತೀಯೋ ನಾನು ಅದಕ್ಕೆ ತಕ್ಕಂತೆ ನಿನ್ನನ್ನು ಎದುರುಗೊಳ್ಳುತ್ತೇನೆ, ನನ್ನಲ್ಲಿ ಹೊತ್ತುಕೊಳ್ಳುತ್ತೇನೆ” ಎಂಬುದು ಈ ವಚನದ ಸರಳ ವಿವರಣೆ.
*ವಚನ :* ಸಿರಿವಂತನೆಂದು ಅಡಿಗಡಿಗೆ ಕೊಂಬುದು ಉಪಜೀವನದ ಪ್ರಸಾದ ಬಡವನೆಂದು ಮರಿಮಗ್ಗುಲಲ್ಲಿ ಕೊಂಬುದು ತುಡಗಣಿಯ ಪ್ರಸಾದ..
(0೬:೨೭):ಚನ್ನಬಸವಣ್ಣ.
ವಿದುಷಿ. ರೇಣುಕಾ ನಾಕೋಡ್.
ದಯವಿಟ್ಟುಈ ವಚನದ ಅರ್ಥವನ್ನು ಪ್ರಕಟಿಸಿ
KhanDita prayatnisuvevu