ನೀವು ಸಿದ್ಧರಿದ್ದರೆ ಅದು ಘಟಿಸುವುದು; ಸಂಭವಿಸದೆ ಇದ್ದರೆ ಚಿಂತಿಸಬೇಕಾಗಿಲ್ಲನಿರಾಶರಾಗಬೇಕಿಲ್ಲ ಏಕೆಂದರೆ ನಿಮ್ಮ ಮಾಡುವಿಕೆಯಿಂದ ಘಟಿಸುವಂತಹದಲ್ಲ. ಒಮ್ಮೆ ಏನಾದರೂ ಘಟಿಸಿದರೂ ಅಹಂನಿಂದ ಬೀಗದಿರಿ, ಇನ್ನೊಮ್ಮೆ ಅದು ಘಟಿಸದೇ ಹೋಗಬಹುದು. ಅದು ಏನಾದರು ಘಟಿಸಿದಲ್ಲಿ ಕೃತಜ್ಞರಾಗಿರಿ, ಅಹೋಭಾವದಲ್ಲಿ ತುಂಬಿರಿ, ಮತ್ತೆ ನಿರೀಕ್ಷೆಯಲ್ಲಿರಿ….| ಓಶೋ, ಕನ್ನಡಕ್ಕೆ: ಧ್ಯಾನ್ ಉನ್ಮುಖ್
ಓಶೋ ಸಂನ್ಯಾಸಿಯೊಬ್ಬರು ಬೆಳದಿಂಗಳ ಧ್ಯಾನದಲ್ಲಿ ಘಟಿಸಿದ ಅನುಭದ ಕುರಿತು ಹೇಳುತ್ತಾರೆ: ಬೆಳದಿಂಗಳ ಧ್ಯಾನದ ನಂತರ ಪರಿಶುದ್ಧ ಮನಸ್ಸಿನಿಂದ ನೋಡಿದಾಗ ಜನರು ಸಂಕಷ್ಟದಲ್ಲಿರುವುದನ್ನು ನೋಡಿದೆ. ಅದರ ಉಪಯೋಗ ಪಡಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ನಾನು ಮುಚ್ಚಲ್ಪಟ್ಟೆ.
ಓಶೋ : ಇಲ್ಲ, ನೀವು ಇದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನೀವು ಆ ಸ್ಥಿತಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ… ನೀವು ಅದನ್ನು ತರಲು ಸಾಧ್ಯವಿಲ್ಲ. ಅದು ಬಂದಾಗಲೆಲ್ಲಾ ಅದು ಬರುತ್ತದೆ, ಮತ್ತು ಅದು ಹೋಗಬೇಕು ಅನಿಸಿದಾಗ ಹೋಗುತ್ತದೆ. ಒಬ್ಬರು ಅದಕ್ಕೆ ಆತಿಥೇಯರಾಗಿರಬೇಕು. ಅತಿಥಿ ಬಂದಾಗ, ಆತಿಥೇಯರಾಗಿರಿ – ಅತಿಥಿ ಹೋದಾಗ, ವಿದಾಯ ಹೇಳಿ.ನೀನು ಇದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಿನ್ನ ಮಾಡುವಿಕೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ – ಇದು ನೈಸರ್ಗಿಕ ವಿದ್ಯಮಾನ. ಮತ್ತು ಹುಣ್ಣಿಮೆಯ ರಾತ್ರಿ, ಕೆಲವೊಮ್ಮೆ ಅದು ಪ್ರಾರಂಭವಾಗುತ್ತದೆ. ಹುಣ್ಣಿಮೆಯ ರಾತ್ರಿ ಮಾನವನ ಪ್ರಜ್ಞೆಯ ಮೇಲೆ ಬಹಳ ರಸವಿದ್ಯೆಯು ಪರಿಣಾಮವನ್ನು ಬೀರುತ್ತದೆ. ಬುದ್ಧನು ಹುಣ್ಣಿಮೆಯ ರಾತ್ರಿಯಲ್ಲಿ ಸಂಬುಧ್ಧತ್ವಕ್ಕೆ ಉಪಲಬ್ಧಿಯಾದರು – ಅಷ್ಟೇ ಅಲ್ಲ, ಅವರು ಅಂತಹದೇ ಹುಣ್ಣಿಮೆಯ ರಾತ್ರಿಯಲ್ಲಿ ಜನಿಸಿದನು, ಅಂತಹದೇ ಹುಣ್ಣಿಮೆಯ ರಾತ್ರಿಯಲ್ಲಿ ಅವನು ಸಂಬುದ್ಧರಾದರು, ಅದೇ ಹುಣ್ಣಿಮೆಯಂದು ದೇಹವನ್ನು ತೊರೆದರು.
ಅವರ ಜನ್ಮದಿನ, ಮರಣದ ದಿನ, ಜ್ಞಾನೋದಯದ ದಿನ, ಎಲ್ಲವೂ ಒಂದು ದಿನವಾಗಿತ್ತು – ಅದು ಹುಣ್ಣಿಮೆಯ ರಾತ್ರಿ… ಅದೇ ತಿಂಗಳು, ಅದೇ ರಾತ್ರಿ. ಹುಣ್ಣಿಮೆಗೆ ಅಪಾರ ಪ್ರಾಮುಖ್ಯತೆ ಇದೆ, ಆದ್ದರಿಂದ ಕೇವಲ ಒಂದು ಕೆಲಸವನ್ನು ಮಾಡಿ: ನೀವು ಲಭ್ಯವಿರಬಹುದು, ಎಲ್ಲವನ್ನೂ ಸೂಚಿಸುತ್ತದೆ. ಅದು ಸಂಭವಿಸಿದಲ್ಲಿ ಒಳ್ಳೆಯದು; ಸಂಭವಿಸದೆ ಇದ್ದರೆ ಚಿಂತೆಯಿಲ್ಲ. ಮುಂದಿನ ಬಾರಿ ನೀವು ಮತ್ತೆ ಪ್ರಯತ್ನಿಸಿ – ಹುಣ್ಣಿಮೆಯ ರಾತ್ರಿ ಬಂದಾಗ, ಕನಿಷ್ಠ ಐದು ದಿನಗಳ ಮೊದಲು ಧ್ಯಾನವನ್ನು ಪ್ರಾರಂಭಿಸಿ, ರಾತ್ರಿಯಲ್ಲಿ ಕುಳಿತು ಕಾಯುತ್ತಿರಿ. ಐದು ದಿನಗಳವರೆಗೆ ಪ್ರತಿದಿನ ರಾತ್ರಿ ಒಂದು ಗಂಟೆ ಕಾಯಿರಿ, ಆಗ ಹುಣ್ಣಿಮೆ ಬರುತ್ತದೆ. ಆ ರಾತ್ರಿ ಕನಿಷ್ಠ ಎರಡು, ಮೂರು ಗಂಟೆಗಳ ಕಾಲ ಕಾಯಿರಿ – ನೀವು ಏನನ್ನೂ ಮಾಡಬೇಕಾಗಿಲ್ಲ: ನೀವು ಅಲ್ಲಿ ಇರಿ, ನಿಮ್ಮ ಉಪಲಬ್ಧಿ ಇದೇ ಅಷ್ಟೇ.
ನೀವು ಸಿದ್ಧರಿದ್ದರೆ ಅದು ಘಟಿಸುವುದು; ಸಂಭವಿಸದೆ ಇದ್ದರೆ ಚಿಂತಿಸಬೇಕಾಗಿಲ್ಲನಿರಾಶರಾಗಬೇಕಿಲ್ಲ ಏಕೆಂದರೆ ನಿಮ್ಮ ಮಾಡುವಿಕೆಯಿಂದ ಘಟಿಸುವಂತಹದಲ್ಲ. ಒಮ್ಮೆ ಏನಾದರೂ ಘಟಿಸಿದರೂ ಅಹಂನಿಂದ ಬೀಗದಿರಿ, ಇನ್ನೊಮ್ಮೆ ಅದು ಘಟಿಸದೇ ಹೋಗಬಹುದು. ಅದು ಏನಾದರು ಘಟಿಸಿದಲ್ಲಿ ಕೃತಜ್ಞರಾಗಿರಿ, ಅಹೋಭಾವದಲ್ಲಿ ತುಂಬಿರಿ, ಮತ್ತೆ ನಿರೀಕ್ಷೆಯಲ್ಲಿರಿ.
ಪ್ರತಿ ಹುಣ್ಣಿಮೆಯು ಇಂತಹ ಕಾಯುವಿಕೆಯಲ್ಲಿರಿ. ಅದು ಮತ್ತೆ ಮತ್ತೆ ಘಟಿಸಬಹುದು ಆದರೆ ಅದು ಬಂದಾಗ ಅದನ್ನು ಹಿಡಿದುಕೊಳ್ಳುವ ನಿಯಂತ್ರಿಸು ಯಾವುದೇ ಪ್ರಯತ್ನ ಬೇಡ. ಈ ಸ್ಥಿತಿಯನ್ನು ಇನ್ನು ಹೆಚ್ಚಿನ ಸಮಯಕ್ಕೆ ಎಳೆಯುವ ಪ್ರಯತ್ನವೂ ಬೇಡ; ನಿಮ್ಮ ಎಲ್ಲಾ ನೀರೀಕ್ಷೆಗಳು ಅದಕ್ಕೆ ತೊಡಕಾಗಿವೆ.ಅದು ಇಡೀ ಸಂಗತಿಯನ್ನು ವಿಷಗೊಳಿಸುತ್ತದೆ.
ಅದು ದಿವ್ಯತ್ವದ ದ್ವಾರವಾಗಿದೆ. ಕೇವಲ ನಿರೀಕ್ಷೆ ಅಷ್ಟೇ ಇರಲಿ…ಆಗಾಧವಾದ ತಾಳ್ಮೆಯಿರಲಿ, ಯಾವುದೇ ಅವಸರವಿಲ್ಲ. ಅದನ್ನು ಸುಧೀರ್ಘಗೊಳಿಸಲು ಹೋಗದಿರಿ. ಅದು ಮಾನವನ ನಿಯಂತ್ರಣಕ್ಕೆ ನಿಲುಕಲಾರದು.ಆದರೆ ಅದನ್ನು ಬೇರೆಯದೇ ರೀತಿಯಲ್ಲಿ ಆಹ್ವಾನಿಸಬಹುದು. ಸ್ನಾನ ಮಾಡಿ, ಹಾಡುತ್ತ-ಕುಣಿಯುತ್ತ, ಮೌನದಲ್ಲಿ ಕುಳಿತುಕೊಳ್ಳಿ- ಕಾಯುತ್ತಿರಿ. ಚಂದ್ರನನ್ನು ನೋಡುತ್ತ ಅವನೊಂದಿಗೆ ಇರಿ, ಹುಣ್ಣಿಮೆ ಬೆರಗನ್ನು ಆಸ್ವಾಧಿಸಿ… ಚಂದ್ರನು ನಿಮ್ಮ ಮೇಲೆ ಸುರಿಯುತ್ತಿದ್ದಾನೆ ಎಂದು ಭಾವಿಸಿ, ಸ್ವಲ್ಪ ನೃತ್ಯ ಮಾಡಿ, ಮತ್ತೆ ಕುಳಿತುಕೊಳ್ಳಿ, ಕಾಯಿರಿ. ಹುಣ್ಣಿಮೆಯ ರಾತ್ರಿ ಧ್ಯಾನಕ್ಕಾಗಿ ನಿಮ್ಮ ನಿರ್ದಿಷ್ಟ ರಾತ್ರಿಯಾಗಲಿ – ಅದು ಸಹಾಯಕವಾಗಿರುತ್ತದೆ.