ಮೌನವಾಗಿರಿ, ಈ 16 ಸಂದರ್ಭಗಳಲ್ಲಿ…

“ಮಾತನಾಡದಿರುವುದೇ ಮೌನ ಎಂದು ಜನರು ಸಾಮಾನ್ಯವಾಗಿ ತಿಳಿದುಕೊಂಡರೂ; ಮೌನದ ನೆಲೆಯು ಇನ್ನೂ ಎತ್ತರದಲ್ಲಿದೆ ಎಂಬುದು ಅದರ ಅಭ್ಯಾಸದಿಂದ ತಿಳಿಯುವುದು. ಮೊದಲು ಮಾತಿಗೂ ಮೌನಕ್ಕೂ ವೈರವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮಾತಿನ ನೆಲೆಯಾಚೆಗೆ ಮೌನದ ಮನೆಯಿದೆ – ಹೌದು. ಆದರೂ ಮೌನದ ಗರ್ಭದ ಸಾಹಿತ್ಯವನ್ನು ಮಾತು ಹೊತ್ತು ಹೊರಗೆ ತರುವದು. ಮಾತಿನ ಸಂತೆಯಲ್ಲಿ ಮೌನದ ಸರಕಿನ ವ್ಯಾಪಾರ ನಡೆಯುವದು. ಹೀಗಿದ್ದೂ ಮಾತೇನು, ಮೌನವೇನು, ಎರಡೂ ಹೊದಿಕೆಗಳೇ. ಒಳಗಿನ ತಿರುಳು ಬೆರೆಯೇ ಇದೆ. ಆ ಒಳಗಿನ ತಿರುಳು ಜೀವಭಾವ. ಮೌನ ಭಿತ್ತಿ , ಮಾತು ಚಿತ್ರ “ ಎನ್ನುತ್ತಾರೆ ಬೇಂದ್ರೆ… । ಚಿದಂಬರ ನರೇಂದ್ರ

ಯಾವಾಗ ಮಾತನಾಡುವ ಪ್ರಲೋಭನೆಯಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಕುರಿತು ಒಂದು ಸಣ್ಣ ಪಟ್ಟಿ.

  1. ಮೌನವಾಗಿರಿ – ನಿಮ್ಮೊಳಗೆ ಸಿಟ್ಟು ತುಂಬಿಕೊಂಡಿರುವಾಗ.
  2. ಮೌನವಾಗಿರಿ – ಎಲ್ಲ ವಾಸ್ತವಾಂಶಗಳು ನಿಮ್ಮ ಬಳಿ ಇಲ್ಲದಿರುವಾಗ.
  3. ಮೌನವಾಗಿರಿ – ಸಂಗತಿಯನ್ನು ನೀವು ಸ್ವತಃ ಪರಿಶೀಲಿಸದಿರುವಾಗ.
  4. ಮೌನವಾಗಿರಿ – ನಿಮ್ಮ ಮಾತುಗಳು ದುರ್ಬಲ ವ್ಯಕ್ತಿಗೆ ನೋವು ಮಾಡಬಹುದಾಗಿರುವಾಗ.
  5. ಮೌನವಾಗಿರಿ – ಅದು ನಿಮ್ಮ ಕೇಳುವ ಸಮಯ ಆಗಿರುವಾಗ.
  6. ಮೌನವಾಗಿರಿ – ಪವಿತ್ರ ವಿಷಯಗಳ ಬಗ್ಗೆ ಹಗುರಾಗಿ ಮಾತನಾಡುವ ಪ್ರಲೋಭನೆ ನಿಮ್ಮೊಳಗೆ ಹುಟ್ಟಿರುವಾಗ.
  7. ಮೌನವಾಗಿರಿ – ನಂತರ ನಿಮ್ಮ ಮಾತಿಗೆ ನೀವೇ ನಾಚಿಕೆಪಡುವ ಪರಿಸ್ಥಿತಿ ಎದುರಾಗಬಹುದಾದಾಗ.
  8. ಮೌನವಾಗಿರಿ – ನಿಮ್ಮ ಮಾತುಗಳು ತಪ್ಪು ಅನಿಸಿಕೆಯನ್ನು ಹುಟ್ಟು ಹಾಕುವ ಸಾಧ್ಯತೆ ಇರುವಾಗ.
  9. ಮೌನವಾಗಿರಿ – ವಿಷಯ ನಿಮಗೆ ಸಂಬಂಧಿಸಿದ್ದಲ್ಲದಿರುವಾಗ.
  10. ಮೌನವಾಗಿರಿ – ನಿಮ್ಮೊಳಗೆ ಸುಳ್ಳು ಹೇಳುವ ಉತ್ಸುಕತೆ ಪ್ರಬಲವಾಗಿರುವಾಗ.
  11. ಮೌನವಾಗಿರಿ – ನಿಮ್ಮ ಮಾತುಗಳು ಇನ್ನೊಬ್ಬರ ಹೆಸರಿಗೆ ಕಳಂಕ ತರುವ ಸಾಧ್ಯತೆ ಇರುವಾಗ.
  12. ಮೌನವಾಗಿರಿ – ನಿಮ್ಮ ಮಾತು ಗೆಳೆತನಕ್ಕೆ ಹಾನಿ ಉಂಟು ಮಾಡಬಹುದಾಗಿರುವಾಗ.
  13. ಮೌನವಾಗಿರಿ – ನೀವು ಇನ್ನೊಬ್ಬರನ್ನು ಜಡ್ಜ್ ಮಾಡಬಹುದಾಗಿರುವಾಗ.
  14. ಮೌನವಾಗಿರಿ – ಕೂಗದೇ ಮಾತನಾಡುವುದು ನಿಮಗೆ ಸಾಧ್ಯವಾಗದಿರುವಾಗ.
  15. ಮೌನವಾಗಿರಿ – ನಿಮ್ಮ ಮಾತುಗಳು ನಿಮ್ಮ ಗೆಳೆಯರನ್ನು , ಕುಟುಂಬವನ್ನು ತಪ್ಪಾಗಿ ಅಭಿವ್ಯಕ್ತಿಸುವ ಸಾಧ್ಯತೆ ಇರುವಾಗ.
  16. ಮೌನವಾಗಿರಿ – ಆ ಮಾತನ್ನು ನೀವು ಈಗಾಗಲೇ ಒಮ್ಮೆ ಹೇಳಿರುವಾಗ.
Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.