ಸುನ್ ತ್ಸೇ ಯುದ್ಧ ನೀತಿ

ಈ ತಂತ್ರವನ್ನು ಯುದ್ಧಗಳಲ್ಲಿ ಮಾತ್ರವಲ್ಲ, ನೆಗೋಶಿಯೋಷನ್ ಗಳಲ್ಲಿ, conflict management ಗಳಲ್ಲಿ, ಮತ್ತು ವ್ಯಾಪಾರಿ ಸ್ಪರ್ಧೆಗಳಲ್ಲಿಯೂ ಉಪಯೋಗ ಮಾಡಬಹುದು. ಯಾವುದು ಆ ತಂತ್ರ? ಓದಿ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ

“ವೈರಿಗೆ ಪಾರಾಗಲು ದಾರಿಯೊಂದನ್ನು ಬಿಡಬೇಕು ; ಇಲ್ಲವಾದರೆ ಅವನು ಕೊನೆಯವರೆಗೂ ನಿಮ್ಮೊಡನೆ ಭೀಕರವಾಗಿ ಹೋರಾಡುತ್ತಾನೆ” ಅನ್ನುತ್ತಾನೆ ಆರ್ಟ್ ಆಫ್ ಕೃತಿಯ ಕರ್ತೃ ಸುನ್ ತ್ಸೇ.

ಈ ಮಾತು ಮಿಲಿಟರಿ ಹೋರಾಟ ತಂತ್ರದ ಒಂದು ಅತ್ಯಂತ ಬುದ್ಧಿವಂತಿಕೆಯ ಮಾತು. ಎಲ್ಲ ಕಡೆಯಿಂದಲೂ ಸುತ್ತುವರೆಯಲ್ಪಟ್ಟಿರುವ ವೈರಿ ಬೇರೆ ದಾರಿಯಿಲ್ಲದೇ, ಯುದ್ಧಕ್ಕೆ ತನ್ನನ್ನು ತಾನು ಪೂರ್ಣವಾಗಿ ಅರ್ಪಿಸಿಕೊಂಡು ಅತ್ಯಂತ ಭೀಕರವಾಗಿ ಯುದ್ಧಕ್ಕೆ ಮುಂದಾಗುತ್ತಾನೆ. ಅವನ ಈ ಸ್ಥಿತಿಯ ಕಾರಣವಾಗಿ ಅವನಿಗೆ ಗೆಲ್ಲುವ ಅವಕಾಶವೂ ಉಂಟು.

ಆದರೆ, ನೀವು ಅವನಿಗೆ ಪಾರಾಗಿ ಹೋಗಲು ದಾರಿಯೊಂದನ್ನು ಬಿಟ್ಟಿದ್ದರೆ, ಅವನು ಈ ಸುಲಭದ ಹಾದಿಯನ್ನು ಆಯ್ಕೆ ಮಾಡಿಕೊಂಡು ಓಡಿಹೋಗಬಹುದು. ಆಗ ನಮ್ಮ ಗೆಲವು ಸುಲಭವಾಗುತ್ತದೆ ಯಾವುದೆ ಹೆಚ್ಚಿನ ಹಾನಿಯಿಲ್ಲದೆ. ಈ ತಂತ್ರವನ್ನು ಯುದ್ಧಗಳಲ್ಲಿ ಮಾತ್ರವಲ್ಲ, ನೆಗೋಶಿಯೋಷನ್ ಗಳಲ್ಲಿ, conflict management ಗಳಲ್ಲಿ, ಮತ್ತು ವ್ಯಾಪಾರಿ ಸ್ಪರ್ಧೆಗಳಲ್ಲಿಯೂ ಉಪಯೋಗ ಮಾಡಬಹುದು. ಪ್ರತಿಸ್ಪರ್ಧಿಗೆ ಒಂದು ಗೌರವಯುತ ಪಾರಾಗುವ ಹಾದಿಯ ಅವಕಾಶ ಮಾಡಿಕೊಡುವುದು, ಇರುವ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಿದೆ ನಿಮ್ಮ ಗುರಿಯನ್ನು ಮುಟ್ಟಲು ಸಹಾಯ ಮಾಡುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.