ಕಾವ್ಯಬೋಧಿ : ನಾಲ್ಕು ಹೊಳಹುಗಳು

ಭಾನುವಾರದ ಓದಿಗೆ ನಾಲ್ಕು ಚೆ ತ್ಸು ಯಾಂಗ್ ಪದ್ಯಗಳು

~ 1 ~
ಯಾರಾದರೂ ಬೇಕಾಗೋದಕ್ಕೆ ಕಾರಣಗಳು ಇರಬೇಕಿಲ್ಲ
ಮತ್ತು
ಯಾರಾದರೂ ಬೇಡವಾಗೋದಕ್ಕೆ ಕಾರಣಗಳು ಇರಬೇಕಾಗ್ತವೆ.
ಸಂಬಂಧಗಳಲ್ಲಿ ನಾವು ದುಃಖ ಅನುಭವಿಸೋದು ಯಾಕೆ ಗೊತ್ತೆ?
ಯಾರಾದರೂ ಬೇಕಾಗೋದಕ್ಕೆ ನಮ್ಮಲ್ಲಿ ಕಾರಣಗಳು ಇರ್ತವೆ.
ಮತ್ತು
ಯಾರಾದರೂ ಬೇಡವಾಗೋದಕ್ಕೆ ನಮ್ಮಲ್ಲಿಲ್ಲದ ಕಾರಣಗಳನ್ನ ಹುಡುಕಿಕೊಳ್ತೇವೆ!

~ 2 ~
ಒಂದೊಂದು ಕನ್ನಡಿಯಲ್ಲಿ ಒಂದೊಂಧು ಥರ ಕಾಣಿಸ್ತೀವಿ;
ಎದುರಿಗಿರೋರು ಹೇಗೆ ತೋರಿಸಿಕೊಡ್ತಾರೋ
ನಾವು ಹಾಹಾಗೇ ಕಾಣಿಸ್ತೀವಿ.
ನಮ್‌ನಮ್ಮ ನಿಜ ಚಹರೆ ನಮನಮಗೆ ಮಾತ್ರ ಗೊತ್ತು,
ಒಳಗನ್ನಡಿ ನಮ್ಮ ಮುಖವನ್ನೇ ತೋರೋದಿಲ್ಲ;
ವಾಸ್ತವ- ನಾವೇನೂ ಆಗಿರೋದಿಲ್ಲ…

~ 3 ~
ಕನ್ನ ಹಾಕೋದು ಶ್ರೀಮಂತರ ಮನೆಗೇನೆ
ರಾಜನಿಗೇನೆ ಶತ್ರುಗಳ ಕಾಟ ಜಾಸ್ತಿ
ಚೆಂದದ ಹುಡುಗಿಗೆ ಊರೆಲ್ಲ ಪ್ರೇಮಿಗಳು
ಹಣ್ಣು ತುಂಬಿದ ಮರಕ್ಕೇನೆ ಜಾಸ್ತಿ ಕಲ್ಲು ಹೊಡೆಯೋದು…
ಹಾಗೇ,
ತುಂಬಾ ಕೆಲಸ ಮಾಡೋರದ್ದೆ ತಲೆದಂಡ ಕೇಳೋದು!!

~ 4 ~
ಶತ್ರುವಾದ್ರೂ ಸರಿ, ನಾಳೆ ಸಾಯ್ತಾನೆ ಅಂತ ಗೊತ್ತಾದಾಗ
ಮಮಕಾರ ಹುಟ್ಟಿಬಿಡತ್ತೆ. ಅವರ ಒಳ್ಳೆತನಗಳು ಕಣ್ಣ ಮುಂದೆ
ಪೆರೇಡ್ ಮಾಡತೊಡಗುತ್ತೆ.
ಈ ಕ್ಷಣ ನನ್ನ ಕೊನೇ ಕ್ಷಣ ಅಂದುಕೊಂಡಾಗ
ಚೆಂದವಾಗಿ ಬದುಕುವ ಉತ್ಕಟತೆ ಹುಟ್ಟಿಕೊಳ್ಳುತ್ತೆ.
ಖುಷಿಯಾಗಿರೋದು, ಪ್ರೀತಿಯಿಂದ ಇರೋದು ನಮ್ಮ ಸಹಜ ಸ್ವಭಾವ.
ಹೇಟ್ ಮಾಡೋಕೆ, ದುಃಖ ಪಡೋಕೆ ಎಷ್ಟು ಎಫರ್ಟ್ ಹಾಕ್ಬೇಕು ಗೊತ್ತಾ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.