ಯುದ್ಧ ಮತ್ತು ಸಣ್ಣ ದೇಶಗಳು : ಒಂದು ಖಲೀಲ್ ಗಿಬ್ರಾನ್ ಕಥೆ

ಅನುವಾದ : ಚಿದಂಬರ ನರೇಂದ್ರ

ಬೆಟ್ಟದ ತಪ್ಪಲಲ್ಲಿ ಒಂದು ಕುರಿ ತನ್ನ ಮರಿಯೊಂದಿಗೆ ಆನಂದದಿಂದ ಹುಲ್ಲು ಮೇಯುತ್ತ ಹಾಯಾಗಿ ಓಡಾಡುತ್ತಿದ್ದರೆ, ಮೇಲೆ ಆಕಾಶದಲ್ಲಿ ಒಂದು ಹಸಿದ ರಣಹದ್ದು ಕುರಿಮರಿಯ ಮೇಲೆ ಹೊಂಚು ಹಾಕಿ ಅವಕಾಶಕ್ಕಾಗಿ ಕ್ಷಣಗಣನೆ ಮಾಡುತ್ತಿತ್ತು.

ಇನ್ನೇನು ಹದ್ದು ವೇಗದಿಂದ ಹಾರುತ್ತ ಕುರಿಮರಿಯ ಹತ್ತಿರ ಬರುತ್ತಿದ್ದಂತೆಯೇ, ಇನ್ನೊಂದು ರಣಹದ್ದು ಅಷ್ಟೇ ರಭಸದಿಂದ ಕುರಿಮರಿಯ ಮೇಲೆ ಆಕ್ರಮಣ ಮಾಡಿತು.

ಎರಡೂ ಹದ್ದುಗಳು ಭೀಕರವಾಗಿ ಒಂದನ್ನೊಂದು ಚುಚ್ಚುತ್ತ, ಜೋರಾಗಿ ಆಕ್ರಂದನ ಮಾಡುತ್ತ ಆಕಾಶದ ತುಂಬ ಗದ್ದಲ ಹಾಕತೊಡಗಿದವು.

ಈ ಗದ್ದಲದಿಂದ ಬೆಚ್ಚಿದ ಕುರಿ, ಬೆರಗಿನಿಂದ ಈ ಯುದ್ಧವನ್ನು ನೋಡುತ್ತ ತನ್ನ ಮರಿಗೆ ಹೇಳಿತು.

“ಎಂಥ ಆಶ್ಚರ್ಯ ನೋಡು ಕಂದ, ಆಕಾಶ ಇಷ್ಟು ಅಪಾರವಾಗಿದ್ದರೂ ಯಾಕೆ ಈ ಸಭ್ಯ ಹಕ್ಕಿಗಳು ಇಷ್ಟೊಂದು ಕಚ್ಚಾಡುತ್ತಿವೆ? ನಿನ್ನ ಮನಸ್ಸಿನಲ್ಲಿ ಪ್ರಾರ್ಥನೆ ಮಾಡು ಕಂದ, ಭಗವಂತ ನಮ್ಮ ಈ ರೆಕ್ಕೆಯ ಗೆಳೆಯರನ್ನು ಒಂದಾಗಿಸಲಿ, ಇವರಿಬ್ಬರ ನಡುವೆ ಶಾಂತಿ ನೆಲೆಸಲಿ”

ಕುರಿಮರಿ ಕಣ್ಣುಮುಚ್ಚಿ ಧ್ಯಾನ ಮಾಡುತ್ತ ಹದ್ದುಗಳಿಗಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡತೊಡಗಿತು.

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.