“ಸಮಾಧಿಗೆ 28 ಅತ್ಯುನ್ನತ ಗುಣಗಳಿವೆ. ಆದ್ದರಿಂದಲೇ ತಥಾಗತರು ಅದರಲ್ಲಿ ತಲ್ಲೀನರಾಗುತ್ತಾರೆ ಎಂದು ಕೇಳಿದ್ದೇನೆ. ಅವು ಯಾವುವು? ದಯವಿಟ್ಟು ತಿಳಿಸಿ” ಎಂದು ನಾಗಸೇನ ಭಂತೇಜಿ ಬಳಿ ರಾಜನೊಬ್ಬ ಕೇಳುತ್ತಾನೆ. ಅದಕ್ಕೆ ಅವರು ನೀಡಿದ ಉತ್ತರ ಹೀಗಿದೆ…
- ವ್ಯಕ್ತಿತ್ವದ ಸಂರಕ್ಷಣೆ ಮಾಡುತ್ತದೆ,
- ದೀರ್ಘಾಯು ನೀಡುತ್ತದೆ,
- ಶಕ್ತಿ ನೀಡುತ್ತದೆ,
- ಬಲ ವೃದ್ಧಿಸುತ್ತದೆ
- ಪರಿಶುದ್ಧಿ ನೀಡುತ್ತದೆ.
- ಕುಖ್ಯಾತಿ ನೀಗುತ್ತದೆ
- ಸುಖ್ಯಾತಿ ತರುತ್ತದೆ.
- ಅತೃಪ್ತಿ ತೊಡೆದು ತೃಪ್ತಿ ನೀಡುತ್ತದೆ,
- ಭಯ ಕಿತ್ತೆಸೆಯುತ್ತದೆ
- ಶ್ರದ್ಧೆ ನೀಡುತ್ತದೆ,
- ಜಡತ್ವ ಕಿತ್ತೊಗೆಯುತ್ತದೆ
- ಉತ್ಸಾಹ ನೀಡುತ್ತದೆ.
- ರಾಗದಿಂದ ಬಿಡುಗಡೆ ಮಾಡಿಸುತ್ತದೆ
- ದ್ವೇಷದಿಂದ ಬಿಡುಗಡೆ ಮಾಡಿಸುತ್ತದೆ
- ಮೋಹದಿಂದ ಬಿಡುಗಡೆ ಮಾಡಿಸುತ್ತದೆ
- ಅಹಂಕಾರದ ಅಂತ್ಯ ಮಾಡುತ್ತದೆ.
- ಎಲ್ಲಾ ಸಂದೇಹಗಳನ್ನು ಮುರಿದು ಹಾಕುತ್ತದೆ.
- ಹೃದಯಕ್ಕೆ ಶಾಂತಿ ನೀಡುತ್ತದೆ,
- ಚಿತ್ತವನ್ನು ಮೃದು ಮಾಡುತ್ತದೆ,
- ಆನಂದ ಪ್ರಾಪ್ತಿಗೈಯುತ್ತದೆ,
- ಗಂಭೀರತೆಯನ್ನು ನೀಡುತ್ತದೆ
- ಅತ್ಯುನ್ನತ ಲಾಭವನ್ನು ನೀಡುತ್ತದೆ.
- ಗೌರವಯುತನನ್ನಾಗಿರಿಸುತ್ತದೆ,
- ಆಹ್ಲಾದತೆಯನ್ನು ತುಂಬಿಸುತ್ತದೆ,
- ಸುಖಾವೃತನನ್ನಾಗಿಸುತ್ತದೆ.
- ಅನಿತ್ಯತೆಯ ಸಾಕ್ಷಾತ್ಕಾರ ತರುತ್ತದೆ,
- ಪುನರ್ಜನ್ಮವನ್ನು ತಡೆಯುತ್ತದೆ.
- ತ್ಯಾಗದ ಎಲ್ಲಾ ಲಾಭಗಳನ್ನು ನೀಡುತ್ತದೆ.
“ಓ ರಾಜ, ಇವೇ ಧ್ಯಾನದ 28 ಮಹತ್ತರ ಗುಣಗಳಾಗಿವೆ. ಆದ್ದರಿಂದಲೇ ತಥಾಗತ ಅವುಗಳ ಉತ್ಕೃಷ್ಟತೆ ಅರಿತು ಅದರಲ್ಲೇ ತಲ್ಲೀನರಾಗುತ್ತಾರೆ. ಏಕೆಂದರೆ ಓ ರಾಜ, ಧ್ಯಾನವು ತಥಾಗತರಿಗೆ ಪರಮಸುಖ ನೀಡುವುದರಿಂದ ನಿಬ್ಬಾಣದ ಪರಮಸುಖ ಸಿಗುವುದರಿಂದಾಗಿ, ಅವರು ಸಮಾಧಿಯಲ್ಲೇ ತಲ್ಲೀನರಾಗುತ್ತಾರೆ. ಅದರಲ್ಲೇ ಕೇಂದ್ರೀಕೃತರಾಗುತ್ತಾರೆ.” ಎಂದು ನಾಗಸೇನ ಭಂತೇ ಜಿ ಉತ್ತರಿಸುತ್ತಾರೆ.
(ಮಾಹಿತಿ : ಅನೀಶ್ ಬೋಧ್)
( MyMandir app download ಮಾಡಿಕೊಂಡು ಈ ಲೇಖನವನ್ನು http://bit.ly/2SjdeIP ಇಲ್ಲಿಯೂ ಓದಬಹುದು…)