ದೈನಂದಿನ ಯುದ್ಧಕ್ಕೆ ಭಗವದ್ಗೀತೆಯ 8 ಪಾಠಗಳು

ಬದುಕೇ ಒಂದು ಯುದ್ಧ. ಯುದ್ಧ ಪ್ರಕ್ರಿಯೆ ಕೂಡಾ ಬದುಕಿನ ಸವಾಲುಗಳಿಗಿಂತ ಬೇರೆಯಲ್ಲ. ಯುದ್ಧಕ್ಕೂ ಬದುಕಿಗೂ ಹೊಂದುವಂಥ ಬೋಧನೆಗಳನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನಮಗೆ ನೀಡಿದ್ದಾನೆ. ಅವುಗಳಲ್ಲಿ 8 ಮುಖ್ಯ ಹೇಳಿಕೆಗಳು ಇಲ್ಲಿವೆ…


1.ಯುದ್ಧವಿರಲಿ, ಬದುಕು… ನಮ್ಮ ಪ್ರಯತ್ನ ಪ್ರಾಮಾಣಿಕವಾಗಿರಬೇಕು. ದೇಶ – ಕಾಲ – ಸಮಯ – ಸಂದರ್ಭದ ಜೊತೆ ನಮ್ಮ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ಅಗತ್ಯವಾಗಿ ದೊರೆಯುವುದು.

bg1
2. ನಾನು ಯುದ್ಧ ಮಾಡುವುದಿಲ್ಲವೆಂದು ಅರ್ಜುನ ತಲೆ ತಗ್ಗಿಸಿದಾಗ ‘ಹೇಡಿಯಂತಾಡಬೇಡ ಪಾರ್ಥ!” ಎಂದು ತಿವಿಯುತ್ತಾನೆ ಗೀತಾಚಾರ್ಯ. ಎಂಥದೇ ಸವಾಲು ಎದುರಾದರೂ ಧೈರ್ಯದಿಂದ ಎದುರಿಸಬೇಕೆಂದು ಬೋಧಿಸುತ್ತಾನೆ.

bg2
3. ಸಾವಿಗೆ ಹೆದರುವವರು ಅರ್ಧ ಸತ್ತ ಹಾಗೆಯೇ. ಬಂದೇ ತೀರುವ ಸಾವಿನ ಚಿಂತೆ ಬಿಟ್ಟು ಬದುಕನ್ನು ಸುಂದರವಾಗಿಟ್ಟುಕೊಳ್ಳವ ಬಗ್ಗೆ ಗಮನ ಕೊಡಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು.

bg3
4. ಹಗಲು – ಇರುಳು, ಶೀತ – ಉಷ್ಣಗಳಂತೆ ಬದುಕಿನಲ್ಲಿ ಸುಖದುಃಖಗಳೂ ಸಹಜ’ ಸೋಲು ಗೆಲವುಗಳೂ ಸಹಜ. ಅವನ್ನು ಸ್ವೀಕರಿಸಲು ಕಲಿಯಬೇಕು.

bg4
5. ಬದುಕಿನಲ್ಲೂ, ಯುದ್ಧದಲ್ಲೂ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ನಮ್ಮ ಪ್ರತಿಯೊಂದು ತೀರ್ಮಾನವೂ ಫಲಿತಾಂಶವನ್ನು ನಿರ್ಧರಿಸುತ್ತಾ ಇರುತ್ತದೆ. ಆದ್ದರಿಂದ, ಉಡಾಫೆ ಸಲ್ಲದು.

bg5
6. ಸುಖ ಬಂದಾಗ ಹಿಗ್ಗಿದರೆ, ದುಃಖ ಬಂದಾಗ ಕುಗ್ಗುವುದು ಸಹಜ. ಆದ್ದರಿಂದ ಏನೇ ಬಂದರೂ ಸಹಜವಾಗಿರಬೇಕು. ಸಮಚಿತ್ತದಿಂದ ಸ್ವೀಕರಿಸಬೇಕು. ಯುದ್ಧದ ಸೋಲುಗೆಲುವುಗಳನ್ನು ನೋಡಬೇಕಾದುದೂ ಹೀಗೆಯೇ.

bg6
7. ಆಸೆ ಆಮಿಷಗಳಿಗೆ ಬಲಿಯಾದರೆ ನಮ್ಮ ಗಮನ, ಕೇಂದ್ರದಿಂದ ವಿಚಲಿತಗೊಳ್ಳುತ್ತದೆ. ಅದರಿಂದ ನಾವು ಬದುಕಲ್ಲೂ ಸೋಲುತ್ತೇವೆ, ಯುದ್ಧದಲ್ಲೂ. ಆದ್ದರಿಂದ ಅವುಗಳ ಕುರಿತು ಎಚ್ಚರವಿರಬೇಕು.

bg7
8. ನಾವು ಆನೆ ಸೊಂಡಿಲಿನ ಮೇಲೆ ಕುಳಿತ ನೊಣದಂತೆ. ಸೊಂಡಿಲು ಅಲುಗಾಡುವುದು ಆನೆಯ ಮರ್ಜಿಯಿಂದ ಹೊರತು ನಮ್ಮ ಭಾರದಿಂದಲ್ಲ. ಇಷ್ಟು ಅರ್ಥ ಮಾಡಿಕೊಂಡರೆ ನಮ್ಮಲ್ಲಿ ಸೋಲುಗೆಲವುಗಳಿಗೆ ನಾವೇ ಕಾರಣರೆಂಬ ಅಹಂಕಾರ ಮೊಳೆಯುವುದಿಲ್ಲ.

bg8

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. ಹೌದು. ಮೇಲಿನ 8 ಗುಣಗಳನ್ನೂ ನಾನು ತಿಳಿದಿದ್ದೇನೆ ಮತ್ತು ಶಕ್ತಿ ಮೀರಿ ಅಂತೆಯೇ ನಡಕೊಳ್ಳಲು ಪ್ರಯತ್ನಿಸಿಯೂ ಇದ್ದೇನೆ. ಹಾಗೆ ನಡಕೊಂಡವರು ಮಾತ್ರ ಈ ಪೃಥಿವಿಯಲ್ಲಿ ಆನಂದವಾಗಿರಬಲ್ಲನು ಎಂಬುದು ನನಗೆ ಮನದಟ್ಟಾಗಿದೆ.

    Like

Leave a reply to ದಿವಾಣ ಕೇಶವ ಭಟ್, ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.