ಅಜ್ಞಾನಿ ಯಾರು? : ಭಗವಾನ್ ಬುದ್ಧನ ವಿವರಣೆ

“ಅಜ್ಞಾನಿ ಯಾರು?” ಎಂದು ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆಗೆ ಬುದ್ಧ ಭಗವಾನರು ನೀಡಿದ ಉತ್ತರ ಇಲ್ಲಿದೆ…

ಒಬ್ಬನು ಬಂದು ಭಗವಾನರಿಗೆ ಹೀಗೆ ಪ್ರಶ್ನಿಸುತ್ತಾನೆ: “ಭಗವಾನ್, ಅಜ್ಞಾನವೆಂದರೇನು ಮತ್ತು ಎಲ್ಲಿಯವರೆಗೆ ಒಬ್ಬನು ಅಜ್ಞಾನಿ ಎನಿಸಿಕೊಳ್ಳುತ್ತಾನೆ?”

ಈ ಪ್ರಶ್ನೆಗೆ ಬುದ್ಧ ನೀಡುವ ಉತ್ತರ ಹೀಗಿದೆ : ಗೃಹಪತಿಯೇ! ಇಲ್ಲಿ ಯಾರು ದೇಹವನ್ನು ಅರಿಯುವುದಿಲ್ಲವೋ ಅದರ ಉದಯವನ್ನು ಅರಿಯುವುದಿಲ್ಲವೋ, ಅದರ ನಿರೋಧವನ್ನು ಅರಿಯುವುದಿಲ್ಲವೋ, ಅದರ ನಿರೋಧಕ್ಕೆ ಒಯ್ಯುವ ಮಾರ್ಗ ಅರಿಯುವುದಿಲ್ಲವೋ ಹಾಗೆಯೇ ವೇದನೆಗಳನ್ನು ಅರಿಯುವುದಿಲ್ಲವೋ ಅವುಗಳ ಉದಯವನ್ನು ಅರಿಯುವುದಿಲ್ಲವೋ ಅವುಗಳ ನಿರೋಧವನ್ನು ಅರಿಯುವುದಿಲ್ಲವೋ, ಅವುಗಳ ನಿರೋಧಕ್ಕೆ ಒಯ್ಯುವ ಮಾರ್ಗ ಅರಿಯುವುದಿಲ್ಲವೋ ಹಾಗೆಯೇ ಸಂಜ್ಞೆಗಳನ್ನು (ಗ್ರಹಿಕೆ) ಅರಿಯುವುದಿಲ್ಲವೋ, ಸಂಖಾರಗಳನ್ನು (ಚಿತ್ತದ ಚಟುವಟಿಕೆ) ಅರಿಯುವುದಿಲ್ಲವೋ, ವಿಜ್ಞಾನವನ್ನು (ಅರಿವನ್ನು) ಅರಿಯುವುದಿಲ್ಲವೋ ಅವುಗಳ ಉದಯವನ್ನು ಅರಿಯುವುದಿಲ್ಲವೋ, ಅವುಗಳ ನಿರೋಧವನ್ನು ಅರಿಯುವುದಿಲ್ಲವೋ ನಿರೋಧಕ್ಕೆ ಒಯ್ಯುವ ಮಾರ್ಗವನ್ನು ಅರಿಯುವುದಿಲ್ಲವೋ ಇಲ್ಲಿಯವರೆಗೆ ಆತನು ಅಜ್ಞಾನಿಯಾಗಿರುತ್ತಾನೆ.

ಅಂದರೆ ಒಟ್ಟಾರೆ ದೇಹ, ಮನಸ್ಸಿನ ವಿಶ್ಲೇಷಣೆ, ಕ್ರಿಯೆ, ಉದಯ ನಿರೋಧ ಮತ್ತು ನಿರೋಧ ಮಾರ್ಗ ಅರಿಯದವರು ಅಜ್ಞಾನಿ ಎನಿಸಿಕೊಳ್ಳುತ್ತಾರೆ ಅಥವಾ ಆರ್ಯಸತ್ಯಗಳನ್ನು ಅರಿಯದವರು ಅಜ್ಞಾನಿಗಳು ಎನಿಸಿಕೊಳ್ಳುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.