ಒಳಿತು ಎಲ್ಲರಿಗಾಗಲಿ…. : ವೇದೋಕ್ತಿ

“ಎಲ್ಲರೂ ಸುಖಿಗಳಾಗಲಿ, ಎಲ್ಲರೂ ಆರೋಗ್ಯವಂತರಾಗಲಿ, ಎಲ್ಲರೂ ಒಳಿತನ್ನು ಕಾಣಲಿ, ಯಾರಿಗೂ ದುಃಖ ಅನಭವವಾಗದಿರಲಿ ಎಲ್ಲೆಡೆಯೂ ಶಾಂತಿ ನೆಲೆಸಲಿ” ಎಂದು ವೇದೋಕ್ತಿಯು ಹಾರೈಸುತ್ತದೆ…


ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ ಭವೇತ್ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವರಿಗೂ ಹಿತವನ್ನು ಬಯಸುವುದರಿಂದ ನಮಗೂ ಹಿತವಾಗುತ್ತದೆ. ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ಭಾಗ್ಯಗಳು ದೊರೆಯಲೆಂದು ನಿತ್ಯವೂ ಪ್ರಾರ್ಥಿಸುವುದರಿಂದ ನಮ್ಮ ಸುತ್ತಲೂ ಸಕಾರಾತ್ಮಕ ತರಂಗಗಳು ನಿರ್ಮಾಣಗೊಳ್ಳುತ್ತವೆ.

“ಎಲ್ಲರಿಗೂ ಒಳಿತಾಗಲಿ” ಎಂಬ ಈ ಪ್ರಾರ್ಥನೆ ನಮ್ಮ ನಿತ್ಯದ ಪ್ರಾರ್ಥನೆಯಾಗಲಿ.

ಪ್ರತಿದಿನದ ಪ್ರಾರ್ಥನೆಯಲ್ಲಿ ಎಲ್ಲರ ಪಾಲಿರಬೇಕು. ಆಗಮಾತ್ರ ನಾವು ಕೂಡಾ ಸುಖದಿಂದ, ಸುರಕ್ಷಿತವಾಗಿರಲು ಸಾಧ್ಯ. ನಮಗೆ ಮಾತ್ರ ಒಳ್ಳೆಯದಾಗಲಿ ಎಂದು ಬಯಸಿದರೆ, ಮತ್ತೊಬ್ಬರು ಅನುಭವಿಸುವ ಕೆಡುಕಿನ ಪ್ರತಿಫಲನ ನಮ್ಮ ಮೇಲೆಯೂ ಹಾದು, ನಾವು ಕೂಡ ಬಾಧೆ ಪಡಬೇಕಾಗುತ್ತದೆ.

ಆದ್ದರಿಂದ, ಯಾರಿಗೂ ಕೆಡಕಾಗುವುದು ಬೇಡ, ಎಲ್ಲರೂ ಸುಖವಾಗಿ, ದುಃಖರಹಿತ ಜೀವನ ನಡೆಸುವಂತಾಗಲಿ ಎನ್ನುವ ಈ ವೇದಬೋಧೆ ನಮ್ಮ ದಿನನಿತ್ಯದ ಪ್ರಾರ್ಥನೆಯಾಗಲಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. prathibha nandakumar's avatar prathibha nandakumar

    ಇದೂ ಇದೆ
    ಸ್ವಸ್ತಿ ಪ್ರಜಾಭ್ಯಾಮ್ ಪರಿಪಾಲಯಂತಾಂ
    ಜ್ಞಾನೇನ ಮಾರ್ಗೇಣ ಮಹೀ ಮಹಿಷಾಹ
    ಗೋ ಬ್ರಾಹ್ಮಣೇಭ್ಯಮ್ ಶುಭಮಸ್ತು ನಿತ್ಯಂ
    ಲೋಕಾ ಸಮಸ್ತಾ ಸುಖಿನೋ ಭವಂತು
    ಕಾಲೇ ವರ್ಷತು ಪರ್ಜನ್ಯಹ
    ಪೃಥುವೀ ಸಸ್ಯಶಾಲಿನೀ
    ದೇಶೋಯಂ ಕ್ಷೋಭ ರಹಿತಃ
    ಬ್ರಾಹ್ಮಣಾ ಸಂತು ನಿರ್ಭಯಾಹ

    Like

Leave a reply to prathibha nandakumar ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.