ವಿಜ್ಞಾತಮ್ ಅವಿಜಾನತಾಂ : ದಿನಕ್ಕೊಂದು ಸುಭಾಷಿತ #19

“ಅರಿಯುವವರಿಗೆ ಅದು ತಿಳಿಯದು, ಅರಿವಿಲ್ಲದವರಿಗೆ ಅದು ತಿಳಿದಿದೆ” ಅನ್ನುತ್ತದೆ ಕೇನೋಪನಿಷತ್ತು.


ಅವಿಜ್ಞಾತಮ್ ವಿಜಾನತಾಂ, ವಿಜ್ಞಾತಮ್ ಅವಿಜಾನತಾಂ || ಕೇನೋಪನಿಷತ್ ||
“ಅರಿಯುವವರಿಗೆ ಅದು ತಿಳಿಯದು, ಅರಿವಿಲ್ಲದವರಿಗೆ ಅದು ತಿಳಿದಿದೆ”
ಇಲ್ಲಿ ಅರಿವು ಎಂದರೆ ವಿಷಯ ವಸ್ತುಗಳನ್ನು ಅರಿಯುವಂಥ ಅರಿವು ಎಂದು ಅರ್ಥ ಮಾಡಿಕೊಳ್ಳಬೇಕು. ಹಾಗಾದರೆ ಬ್ರಹ್ಮವನ್ನು ತಿಳಿಯುವುದು ಹೇಗೆ?
ಉಪನಿಷತ್ತು ಹೇಳುತ್ತದೆ; “ನಮ್ಮ ಅಂತರಂಗದಲ್ಲಿ ಉಂಟಾಗುವ ಎಲ್ಲ ಚಿಂತನೆಗಳನ್ನು ಅರಿಯುವುದು ಆತ್ಮ. ಎಲ್ಲ ಮಾನಸಿಕ ಅಲೆಗಳನ್ನು ನೋಡಬಲ್ಲ, ಬೆಳಗುವ ಚೈತನ್ಯಶಕ್ತಿಯಾದ ಅದು, ಆ ಎಲ್ಲ ಚಿಂತನಾಲಹರಿಗಳಲ್ಲೂ ಸಮಾನವಾಗಿ ತೋರುತ್ತದೆ. ಮಾನಸಿಕ ಪ್ರತ್ಯಯಗಳು ಬದಲಾಗುತ್ತ ಇರುತ್ತವೆ. ಆದರೆ ಅವುಗಳನ್ನು ತನ್ ಚೈತನ್ಯದಿಂದ ಬೆಳಗುವ ಆತ್ಮದಲ್ಲಿ ಯಾವ ವಿಕಾರವೂ ಉಂಟಾಗುವುದಿಲ್ಲ. ಆತ್ಮವನ್ನು ಈ ಮಾನಸಿಕ ಚಿಂತನೆಯ ಅಲೆಗಳ ಮೂಲಕವೇ ಅರಿಯಲು ಸಾಧ್ಯ. ಅದಕ್ಕೆ ಬೇರೆ ದಾರಿಯೇ ಇಲ್ಲ.
ಮನಸ್ಸಿನ ಅಲೆಗಳೆಲ್ಲದರ ಒಳಗಿರುವುದು ಆತ್ಮವೆಂದು ನಾವು ಯಾವಾಗ ಅರಿಯುತ್ತೇವೋ, ಆಗ ಮಾತ್ರ ಅದನ್ನು ನಿಜವಾಗಿ ಅರಿತಂತೆ. ಇದುವೇ ದರ್ಶನ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.