ಹಾಫಿಜ್’ಗೆ ಭಗವಂತ ಹೇಳಿದ್ದು : ಅರಳಿಮರ POSTER

ಭಗವಂತ ಹೇಳಿದ, “ನಿಮ್ಮ ಬದುಕು ನನ್ನನ್ನು ಸೃಷ್ಟಿಸಿದೆ. ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ” ~ ಹಾಫಿಜ್

Silhouette of Young Mother Hugging Toddler Son at Sunset

ಕಲ ಜಡ ಚೇತನಗಳನ್ನು ಭಗವಂತನ ಸೃಷ್ಟಿ ಎಂದು ನಂಬುವುದಾದರೆ, ಭಗವಂತನೂ ಈ ಸಮಸ್ತದಿಂದ ರೂಪುಗೊಂಡ ಪರಮಶಕ್ತಿಯಾಗಿದ್ದಾನೆ (ಇಲ್ಲಿ ‘ಆಗಿದ್ದಾನೆ’ ಎನ್ನುತ್ತಿರುವುದು ವಾಕ್ಯಬಳಕೆಯ ರೂಢಿಯಿಂದಷ್ಟೆ. ವಾಸ್ತವದಲ್ಲಿ ಭಗವಂತ ಎಂಬ ಆತ್ಯಂತಿಕ ಶಕ್ತಿಯನ್ನು ಗಂಡು – ಹೆಣ್ಣೆಂದು ನಿರ್ವಚಿಸಲು ಬರುವುದಿಲ್ಲ. ಇದು ಲಿಂಗಾತೀತ ಶಕ್ತಿ). 

ಸೃಷ್ಟಿಯ ಪ್ರತಿಯೊಂದು ಜಡ ಚೇತನಗಳೂ ಭಗವಂತನ ಅಸ್ತಿತ್ವದ ತುಣುಕುಗಳೇ. ತುಣುಕು ಅನ್ನುವುದಕ್ಕಿಂತ, ಭಗವಂತನ ಪ್ರತಿರೂಪಗಳೇ… ಅಥವಾ ವಿಸ್ತರಣೆಯೇ ಆಗಿವೆ. ಇವುಗಳಲ್ಲಿ ಒಂದನ್ನು, ಒಂದು ಕಣವನ್ನು “ಇದು ಭಗವಂತನಲ್ಲ” ಎಂದು ಹೊರಗಿಟ್ಟರೂ ಭಗವಂತ ಅಪೂರ್ಣನಾಗುತ್ತಾನೆ. 

ಈ ಕಾಣ್ಕೆಯನ್ನು ಪಡೆದ ಹಾಫಿಜ್ ಹೇಳುತ್ತಾನೆ, “ಭಗವಂತ ಹೇಳಿದ, ನೀವು ಪ್ರತಿಯೊಬ್ಬರ ಆತ್ಮವೂ ನನ್ನನ್ನು ಪೂರ್ಣಗೊಳಿಸುತ್ತದೆ ಎಂದು”. ಹಾಫಿಜನ ಮಾತು ಎಷ್ಟು ಅರ್ಥಪೂರ್ಣವಾಗಿದೆ ನೋಡಿ! ನಮ್ಮೆಲ್ಲರ ಆತ್ಮದ ಆತ್ಯಂತಿಕ ಮೊತ್ತವೇ ಪರಮಾತ್ಮ. ಅಲ್ಲಿ ಎಲ್ಲ ಪ್ರಭೇದಗಳ ಪ್ರಾಣಿಗಳೂ ಇವೆ. ಎಲ್ಲ ಜಾತಿ – ಧರ್ಮಗಳಿಂದ ಗುರುತಿಸಿಕೊಂಡ ಮನುಷ್ಯರೂ ಇದ್ದಾರೆ. ಕುವೆಂಪು ಹೇಳುವಂತೆ, “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ”. ಆದ್ದರಿಂದ ನಾವು ಪ್ರತಿಯೊಬ್ಬರನ್ನೂ ಪ್ರತಿಯೊಂದನ್ನೂ ಗೌರವಿರಲು ಕಲಿಯಬೇಕು ಅನ್ನುವುದು ಹಾಫಿಜ್ ಹೇಳಿಕೆಯ ಒಟ್ಟು ಆಶಯ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.