ಬದಲಾವಣೆಗೆ ಪ್ರಯತ್ನಿಸಬೇಡಿ, Just be! : ಓಶೋ

ಹಾಗಾಗಿಯೇ, ಹುಡುಕಾಟದ ಹಾದಿಯಲ್ಲಿ, ಜ್ಞಾನದ ಹಾದಿಯಲ್ಲಿ, ಅನುಭಾವದ ಹಾದಿಯಲ್ಲಿ ನೀವು ಮಾಡಬೇಕಾದದ್ದು ಏನೂ ಇಲ್ಲ. ಸುಮ್ಮನೇ ಶರಣಾಗಬೇಕು. ಅಕಸ್ಮಾತ್ ನೀವು ಏನಾದರೂ ಮಾಡಿದಿರಾದರೆ, ನೀವು ಉಳಿದು ಹೋಗುತ್ತೀರಿ, ಆ ಉಳಿದು ಹೋದದ್ದಕ್ಕೆ ಅಹಂ ಅಂಟಿಕೊಳ್ಳುತ್ತದೆ.

ಓಶೋ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಸೂಫಿ ಅನುಭಾವಿ ಒಂದು ಹಳ್ಳಿಯನ್ನು ಪ್ರವೇಶ ಮಾಡುವ ದಾರಿಯಲ್ಲಿ ಮೇಣದ ಬತ್ತಿಯನ್ನು ಬೆಳಗುತ್ತಿದ್ದ ಒಬ್ಬ ಮುಗ್ಧ ಹುಡುಗನನ್ನು ಗಮನಿಸಿದ.

ಮೇಣದ ಬತ್ತಿಯ ಬೆಳಕಲ್ಲಿ ಹುಡುಗನ ಮುಖ ಕಾಂತಿಯಿಂದ ಬೆಳಗುತ್ತಿತ್ತು. ಸೂಫಿ ಕುತೂಹಲದಿಂದ ಆ ಹುಡುಗನನ್ನು ಪ್ರಶ್ನೆ ಮಾಡಿದ.

“ ನೀನು ಬೆಳಗಿದ್ದ ಈ ಕ್ಯಾಂಡಲ್ ? “

“ ಹೌದು “ ಹುಡುಗ ಉತ್ತರಿಸಿದ.

“ ಹಾಗಾದರೆ ಕ್ಯಾಂಡಲ್ ನ ಜ್ವಾಲೆ ಎಲ್ಲಿಂದ ಬಂತು, ನೀನು ನೋಡಿರಬೇಕು ಅಲ್ವಾ ? ಹೇಳು ಆ ಜ್ವಾಲೆ ಎಲ್ಲಿಂದ ಬಂತು ? “

ಸೂಫಿ ತಮಾಷೆ ಮಾಡಿದ.

ಹುಡುಗ ನಗುತ್ತ, ಕ್ಯಾಂಡಲ್ ನ ಊದಿ ಆರಿಸಿಬಿಟ್ಟ. ಮತ್ತು ಸೂಫಿಯನ್ನ ಪ್ರಶ್ನೆ ಮಾಡಿದ.

“ ಈ ಜ್ವಾಲೆ ಆರಿ ಹೋಗುವುದನ್ನ ನೀನು ನೋಡಿದೆ ಅಲ್ವ, ಹೇಳು ಆ ಜ್ವಾಲೆ ಎಲ್ಲಿ ಹೋಯಿತು ? “

ಜ್ವಾಲೆ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಯಾರಿಗೂ ಗೊತ್ತಿಲ್ಲ. ಜ್ವಾಲೆ ದಾಖಲಾಗಿದ್ದು ಅನಸ್ತಿತ್ವದಿಂದ ಅಥವಾ ಎಲ್ಲದರ ಮೂಲಕ , ಈ ಎರಡೂ ಒಂದೇ. ಅದು ಹೋದದ್ದು ಅನಸ್ತಿತ್ವದ ಒಳಗೆ ಅಥವಾ ಎಲ್ಲದರ ಒಳಗೆ ಈ ಎರಡೂ ಕೂಡ ಒಂದೇ. ಇದು ನಿರ್ವಾಣ.

ಸೂಫಿಗಳು, ಇದನ್ನೇ ಫನಾ ಎನ್ನುತ್ತಾರೆ ; ಸಂಪೂರ್ಣವಾಗಿ ಕಳೆದು ಹೋಗುವುದು.

ಹಾಗಾಗಿಯೇ, ಹುಡುಕಾಟದ ಹಾದಿಯಲ್ಲಿ, ಜ್ಞಾನದ ಹಾದಿಯಲ್ಲಿ, ಅನುಭಾವದ ಹಾದಿಯಲ್ಲಿ ನೀವು ಮಾಡಬೇಕಾದದ್ದು ಏನೂ ಇಲ್ಲ. ಸುಮ್ಮನೇ ಶರಣಾಗಬೇಕು. ಅಕಸ್ಮಾತ್ ನೀವು ಏನಾದರೂ ಮಾಡಿದಿರಾದರೆ, ನೀವು ಉಳಿದು ಹೋಗುತ್ತೀರಿ, ಆ ಉಳಿದು ಹೋದದ್ದಕ್ಕೆ ಅಹಂ ಅಂಟಿಕೊಳ್ಳುತ್ತದೆ.

ಬದಲಾವಣೆಗೆ ಪ್ರಯತ್ನಿಸಬೇಡಿ, ಸುಧಾರಣೆಗಾಗಿ ತುಡಿಯಬೇಡಿ. ನಿಮ್ಮನ್ನು ಉತ್ತಮಗೊಳಿಸಿಕೊಳ್ಳುವ ಯಾವ ಪ್ರಯತ್ನಕ್ಕೂ ಕೈ ಹಾಕಬೇಡಿ. ಸುಮ್ಮನೇ ಇದ್ದು ಬಿಡಿ. Just Be.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.