ಕುಸುಮಾಕರರು ಹೇಳಿದ ಬೇಂದ್ರೆ ಪ್ರಸಂಗ : Coffeehouse ಕತೆಗಳು

ಕನ್ನಡದ ಪ್ರಸಿದ್ಧ ಕಾದಂಬರಿಕಾರ ವಸಂತ ದಿವಾಣಜಿ (ಕುಸುಮಾಕರ ದೇವರಗಣ್ಣೂರು) ಬೇಂದ್ರೆ ಕುರಿತಾಗಿ ತಮಗೆ ಹೇಳಿದ ಸಂಗತಿಯೊಂದನ್ನು ಜಯಂತ್ ಕಾಯ್ಕಿಣಿ ಹೀಗೆ ನೆನಪು ಮಾಡಿಕೊಳ್ಳುತ್ತಾರೆ… ~ ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ

ಒಮ್ಮೆ ಬೇಂದ್ರೆ ಸಾಹಿತ್ಯದ ಸಮಾರಂಭಕ್ಕೆಂದು ಸೊಲ್ಲಾಪುರಕ್ಕೆ ಹೋಗಿರುತ್ತಾರೆ. ಕಾರ್ಯಕ್ರಮದ ನಂತರ ಸ್ಥಳೀಯ ಮರಾಠಿ ಸಾಹಿತಿಗಳು ಬೇಂದ್ರೆಯವರನ್ನು ತಮಾಶಾ ನೋಡಲಿಕ್ಕೆ ಕರೆದುಕೊಂಡು ಹೋಗಿರುತ್ತಾರೆ. ತಮಾಶಾ ಕಾರ್ಯಕ್ರಮ ಮುಗಿದ ನಂತರ ಒಬ್ಬ ಮರಾಠಿ ಸಾಹಿತಿ, ತಮಾಶಾ ದ ನಟಿಗೆ ಹೇಳುತ್ತಾರೆ “ ಕಾಯ್ ಬಾಯಿ ಆಜ ತುಮ್ಹಿ ಅಸ್ಸಲ್ ತಮಾಶಾ ದಾಖವಲ ನಹೀ” ಅಂತ. ಹಾಗೆಂದರೆ ನೀವು ನಮಗೆ ಅಸಲೀ ತಮಾಶಾ ತೋರಿಸಲಿಲ್ಲ ಇವತ್ತು ಅಂತ. ತಮಾಶಾ ಪ್ರಸಿದ್ಧ ಜಾನಪದ ಕಲೆಯಾದರೂ ಆಗ ಅದು ವ್ಯಾಪಾರಿಕರಣಗೊಂಡು ಅಶ್ಲೀಲತೆಯ ಸೊಂಕು ತಗುಲಿಸಿಕೊಂಡು ಬಿಟ್ಟಿತ್ತು. ಆ ಮರಾಠಿ ಸಾಹಿತಿ ಹೇಳಿದ್ದು ಏನೆಂದರೆ ನಿಮ್ಮ ಇವತ್ತಿನ ತಮಾಶಾದಲ್ಲಿ ಆ ಅಶ್ಲೀಲತೆಯ ಮಜಾ ಇರಲಿಲ್ಲ ಅಂತ.

ಇದಕ್ಕೆ ಉತ್ತರಿಸುತ್ತ ಆ ತಮಾಶಾ ನಟಿ ಹೇಳುತ್ತಾಳೆ, “ಇವತ್ತು ನೀವೆಲ್ಲ ಗೌರವಸ್ಥರೆಲ್ಲ ಸಂಸಾರ ಸಮೇತ ಬಂದಿದ್ದೀರಿ. ನಿಮ್ಮ ಮಾನ ಕಾಪಾಡವುದು ನಮ್ಮ ಕರ್ತವ್ಯ”.

ಅವಳ ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಅಲ್ಲಿಯೇ ಇದ್ದ ಬೇಂದ್ರೆ, “ತಾಯಿ ನಮ್ಮ ಇಡಿ ಸಮಾಜದ ಮಾನ ಮರ್ಯಾದೆ ಎಲ್ಲ ನಿಮ್ಮ ಉಡಿಯಲ್ಲಿದೆ” ಎನ್ನುತ್ತ ಅವಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಡುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.