ಬಂದು ಹೋಗಲು ಮಾರ್ಗವಿದೆ. ಆದರೂ ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ ಬಂಧಿಸಿಕೊಂಡು, ತಾನಾಗಿಯೇ ಸಾಯುತ್ತದೆ. ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು
ರಾಮಕೃಷ್ಣ ವಚನವೇದದಿಂದ, 3 ಹೊಳಹುಗಳು… : ಅರಳಿಮರ posters
ಆಕರ: ರಾಮಕೃಷ್ಣ ವಚನವೇದ
ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ
ಈ ಆಧುನಿಕ ಯುಗಕ್ಕೆ ಬೇಕಾದ ಸಮನ್ವಯ ಧರ್ಮವನ್ನು ರಾಮಕೃಷ್ಣ ಪರಮಹಂಸರು ಸ್ಥಾಪಿಸಿದರು. ಅದು ಏಕಕಾಲಕ್ಕೆ ಎಲ್ಲ ಧರ್ಮಗಳನ್ನೂ ಒಳಗೊಂಡ ಮತ್ತು ಎಲ್ಲದರಿಂದಲೂ ಹೊರತಾದ ವಿಶ್ವ ಧರ್ಮ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಪರಮಹಂಸರನ್ನು ‘ಸ್ಥಾಪಕಾಯ ಚ ಧರ್ಮಸ್ಯ’ ಎಂದು ಸ್ತುತಿಸಿರುವುದು.
ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ… : ಅಧ್ಯಾತ್ಮ ಡೈರಿ
ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ~ ಅಲಾವಿಕಾ
ಶ್ರೀರಾಮಕೃಷ್ಣ ಪರಮಹಂಸರ ಗುರುಭಾವ
ಶ್ರೀ ರಾಮಕೃಷ್ಣ ಪರಮಹಂಸರು ಭಾರತದ ಧಾರ್ಮಿಕ ಪುನರುತ್ಥಾನಕ್ಕೆ ಕಾರಣವಾದ ಮಹಾ ಸಾಧಕರಲ್ಲಿ ಪ್ರಮುಖರು. ಇಂದು ಪರಮಹಂಸರ ಜನ್ಮದಿನ. ತನ್ನಿಮಿತ್ತಿ ಎ.ಆರ್. ಕೃಷ್ಣ ಶಾಸ್ತ್ರಿಯವರ “ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ” ಕೃತಿಯಿಂದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.
ಜೀವನದ ಯಶಸ್ಸಿಗೆ ದಾರಿ ತೋರುವ ಪರಮಹಂಸರ 7 ಸಾಮತಿಗಳು
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 4| ಭರತ ಖಂಡಕ್ಕೆ ಪರಮಹಂಸರು ಮತ್ತು ಸ್ವಾಮೀಜಿಯ ಕೊಡುಗೆ ಏನು?
ಸ್ವಾಮಿ ಶಿವಾನಂದರ ಬಳಿ ಬಂದ ಭಕ್ತರೊಬ್ಬರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ ರಾಮಕೃಷ್ಣ ಮಹಾಸಂಘ ಈ ನಿಟ್ಟಿನಲ್ಲಿ ತಟಸ್ಥವಾಗಿದೆ ಎಂದು ಆಕ್ಷೇಪಿಸುತ್ತಾರೆ. ಭಕ್ತರ ಎರಡು ಪ್ರಶ್ನೆಗಳಿಗೆ ಶಿವಾನಂದರು ಉತ್ತರಿಸುತ್ತಾರೆ. ನಂತರ ಭಕ್ತರು ಮತ್ತೂ ಒಂದು ಪ್ರಶ್ನೆ ಕೇಳಲು ಮುಂದಾಗುತ್ತಾರೆ. ಈ ಪ್ರಶ್ನೋತ್ತರ ಹೀಗಿದೆ… | ಕನ್ನಡಕ್ಕೆ : ಕುವೆಂಪು ಹಿಂದಿನ ಲೇಖನವನ್ನು ಇಲ್ಲಿ ಓದಿ : https://aralimara.com/2019/01/03/kuvempu-4/ ಭಕ್ತ : ಮಹಾರಾಜ್, ಮಹಾತ್ಮಾಜಿಯ ಅಸಹಕಾರ ಚಳವಳಿಯಿಂದ ಉಂಟಾದ ರಾಷ್ಟ್ರೀಯ ಜಾಗೃತಿಗೆ ಮತ್ತಷ್ಟು ಪ್ರಚೋದನೆ ದೊರೆಯುತ್ತಿತ್ತಲ್ಲವೆ ಶ್ರೀ ರಾಮಕೃಷ್ಣ […]
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ ~ 2| ಶಿವಾನಂದರ ಉತ್ತರ
ಸ್ವಾಮಿ ಶಿವಾನಂದರಿಗೆ ಭಕ್ತರೊಬ್ಬರು ಕೇಳಿದ ಪ್ರಶ್ನೆಯನ್ನು ಹಿಂದಿನ ಸಂಚಿಕೆಯಲ್ಲಿ (ಇಲ್ಲಿ ನೋಡಿ : https://aralimara.com/2019/01/01/kuvempu-2/) ಓದಿದ್ದೀರಿ. ಅವರ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? ಅದನ್ನು ಸ್ವಾಮಿ ಅಪೂರ್ವಾನಂದರು ಹೀಗೆ ದಾಖಲಿಸಿದ್ದಾರೆ | ಕನ್ನಡಕ್ಕೆ : ಕುವೆಂಪು ಸ್ವಾಮಿ ಶಿವಾನಂದರ ಮುಖಮಂಡಲದಪ್ರಶಾಂತಿ ಒಯ್ಯನೆ ಪರಿವರ್ತಿತವಾಯಿತು. ಒಂದು ಗುರುತರವಾದ ಗಂಭೀರಮುದ್ರೆ ಅಲ್ಲಿ ಸಿಂಹಾಸನಸ್ಥವಾದಂತೆ ತೋರಿತು. ತುಸು ಹೊತ್ತಾದ ಮೇಲೆ ಅವರ ಮೌನ ಮೊಳಗಿತಿಂತು : “ನೋಡು, ಕಾ… ಭಗವದವತಾರದ ನಡೆನುಡಿ ರೀತಿನೀತಿ ಸಾಂಆನ್ಯ ಮಾನವನ ವಿಚಾರಬುದ್ಧಿಗೆ ಮೀರಿವೆ. ನೀನಾಗಲೀ ರಾಷ್ಟ್ರವಾಗಲೀ […]
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ | ಆಯ್ದಭಾಗ ~ 1
“ಸಮಸ್ತ ದೇಶ ಜೀವನವೂ ಚಳವಳಿಯ ಉಸಿರಲ್ಲಿ ಕುದ್ದು, ಬೆಂದು ತಲ್ಲಣಿಸುತ್ತಿರುವಾಗ ಶ್ರೀ ರಾಮಕೃಷ್ಣ ಸಂಸ್ಥೆ ಮಾತ್ರ ಏಕೆ ತೆಪ್ಪಗೆ ಕೂತಿದೆ? ದೇಶಕ್ಕೆ ನಿಮ್ಮ ಕಾಣಿಕೆ ಏನು? ಸ್ವಾತಂತ್ರ್ಯ ಸಂಪಾದನೆಗೆ ನೀವು ಮಾಡುವುದೇನೂ ಇಲ್ಲವೆ? ಶ್ರೀರಾಮಕೃಷ್ಣ ಸಂಸ್ಥೆಯ ಈ ವರ್ತನೆ ಅರಿಯಲಾರದೆ ದೇಶವೆಲ್ಲ ಅಚ್ಚರಿಗೊಂಡಿದೆ. ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಮಹಾಸಂಸ್ಥೆ ಮಾಡಬೇಕಾದ ಕರ್ತವ್ಯ ಯಾವುದೂ ಇಲ್ಲವೆ?” ಭಕ್ತ ,ಶಿವಾನಂದರನ್ನು ಪ್ರಶ್ನಿಸಿದ ~ ಸಂಕಲನ : ಸ್ವಾಮಿ ಅಪೂರ್ವಾನಂದ | ಕನ್ನಡಕ್ಕೆ : ಕುವೆಂಪು ಅದು ಅಸಹಕಾರ ಚಳವಳಿಯ […]
ಆತ್ಮಜಾಗೃತಿ : ರಾಮಕೃಷ್ಣ ವಚನ ವೇದ
ಮೊದಲು ಅದ್ವೈತ ಜ್ಞಾನ, ನಂತರ ಆತ್ಮಜಾಗೃತಿ. ಅದರ ನಂತರ ಆನಂದವೇ ಆನಂದ… ನಿತ್ಯಾನಂದ! ~ ರಾಮಕೃಷ್ಣ ಪರಮಹಂಸ ಎಲ್ಲರಿಗೂ ಬ್ರಹ್ಮಜ್ಞಾನ ಸಾಧ್ಯ. ಜೀವಾತ್ಮ ಪರಮಾತ್ಮ ಎಂಬ ಎರಡು ವಸ್ತುಗಳು ಇವೆ. ಪ್ರಾರ್ಥನೆಯಿಂದ ಜೀವಾತ್ಮ ಪರಮಾತ್ಮನೊಡನೆ ಐಕ್ಯವಾಗಲು ಸಾಧ್ಯ. ಕೆಲವರಲ್ಲಿ ಬಹಳ ಬೇಗ ಆತ್ಮಜಾಗೃತಿ ಉಂಟಾಗಿಬಿಟ್ಟಿರುತ್ತದೆ. ಅವರಲ್ಲಿ ಒಂದು ವಿಶೇಷ ಗುಣ ನೋಡಬಹುದು. ಭಗವತ್ಸಂಬಂಧವಾದ ಮಾತುಕತೆ ಹೊರತು ಬೇರೇನೂ ಅವರಿಗೆ ರುಚಿಸದು. ಅವರು ಚಾತಕ ಪಕ್ಷಿಯ ಹಾಗೆ. ಮಳೆ ನೀರಿನ ಹೊರತು ಯಾವ ನದಿಯ ನೀರನ್ನೂ ಅದು ಕುಡಿಯದು. […]