‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ
ಬೌದ್ಧಿಕತೆ ನಮ್ಮ ಯಾವ ಸಮಸ್ಯೆಯನ್ನೂ ಪರಿಹರಿಸಲಾರದು : ಜಿಡ್ಡು ಕಂಡ ಹಾಗೆ
ಬೌದ್ಧಿಕತೆಯ ವಲಯವೇ ಸೀಮಿತವಾದದ್ದು ಏಕೆಂದರೆ ಬೌದ್ಧಿಕತೆ, ನಮ್ನನ್ನು ತಯಾರು ಮಾಡಿದ ಎಲ್ಲ ನಂಬಿಕೆಗಳ, ಸಂಪ್ರದಾಯಗಳ, ಎಲ್ಲ ಕಲಿಕೆಯ ಒಟ್ಟು ಮೊತ್ತ
ಕೆಡವುವುದೆಂದರೆ ಹೊಸದಾಗಿ ಕಟ್ಟುವುದು | ಜಿಡ್ಡು ಕಂಡ ಹಾಗೆ
ನಾವು ಕೆಡವಬೇಕಾದದ್ದು ಮಾನಸಿಕವಾಗಿ, ಪ್ರಜ್ಞಾಪೂರ್ವಕ ಅಥವಾ ಅಪ್ರಜ್ಞಾಪೂರ್ವಕವಾಗಿ ನಾವು ನಮ್ಮ ಸುತ್ತಲೂ ರಕ್ಷಣಾ ವ್ಯವಸ್ಥೆಗಳನ್ನ ಮತ್ತು ತರ್ಕಬದ್ಧವಾಗಿ, ವೈಯಕ್ತಿಕವಾಗಿ , ಆಳವಾಗಿ, ಕೆಲವೊಮ್ಮೆ ತೋರಿಕೆಗಾಗಿ ಕಟ್ಟಲಾಗಿರುವ ಭದ್ರತೆಗಳನ್ನ.
ಭಾವುಕತೆ ಮತ್ತು ಭಾವೋದ್ವೇಗ ಮತ್ತು ಕ್ರೌರ್ಯದ ಹುಟ್ಟು | ಜಿಡ್ಡು ಕಂಡ ಹಾಗೆ
ಭಾವುಕತೆ ಮತ್ತು ಭಾವೋದ್ವೇಗ ಇರುವಲ್ಲಿ ಹಿಂಸೆಯ ಹಾಜರಾತಿ ಪ್ರೇಮದ ಗೈರು ಹಾಜರಿ ಅನಿವಾರ್ಯ.
ಅಹಂಕಾರದ ಜ್ವರ ಇಳಿಸುವ ವಿದ್ವಾಂಸರ ಸಹವಾಸ : ನೀತಿಶತಕದಿಂದ, ಸುಭಾಷಿತ…
ನಮ್ಮ ವಿದ್ವತ್ತಿನ ಮಟ್ಟವನ್ನು ನಮಗಿಂತಲೂ ಹೆಚ್ಚು ವಿದ್ವಾಂಸರಾದರೊಡನೆ ತುಲನೆ ಮಾಡಿದಾಗ ನಾವೆಷ್ಟು ಚಿಕ್ಕವರು, ನಾವು ಓದುವುದು ಇನ್ನೂ ಇದೆ ಎನ್ನುವ ಅರಿವು ಮೂಡುತ್ತದೆ. ಆ ಅರಿವು ಮುಂದಿನ ಪ್ರಗತಿಗೆ ಪೂರಕವಾಗುತ್ತದೆ : ಭರ್ತೃಹರಿ
ಕಾಲೋ ನ ಯಾತೋ ವಯಮೇವ ಯಾತಾ : ದಿನದ ಸುಭಾಷಿತ
ಮನುಷ್ಯರೆಂದೂ ಸರ್ವತಂತ್ರ ಸ್ವತಂತ್ರರಲ್ಲ. ಕಣ್ಣಿಗೆ ಕಾಣದ ಕಡಿವಾಣಗಳು ಬೀಳುತ್ತಲೇ ಇರುತ್ತವೆ. ಇದುವೇ ಜೀವನ….
ಸುಖ ದುಃಖಗಳು ಕಾಡದಿರುವಂತೆ ಏನು ಮಾಡಬೇಕು? : ಭಗವದ್ಗೀತೆಯ ಬೋಧನೆ
ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಸ್ಥಿತಪ್ರಜ್ಞತೆಯ ಲಕ್ಷಣಗಳನ್ನು ವಿವರಿಸಿದ್ದು, ಅವು ಈ ದಿನಮಾನಕ್ಕೆ ಅತ್ಯಂತ ಪ್ರಸ್ತುತವಾಗಿದೆ.
ಎಲ್ಲ ಮೋಡಗಳೂ ಮಳೆಗರಿಯುವುದಿಲ್ಲ : ಬೆಳಗಿನ ಹೊಳಹು
ಪಂಚೇಂದ್ರಿಯಗಳ ಮೇಲೆ ಹಿಡಿತವಿರಲಿ : ಭಾಗವತ ಪುರಾಣ
ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಂಯಮಿಗಳಾಗಿರಬೇಕು ಎಂದು ಭಾಗವತ ಹೇಳುತ್ತದೆ. ಯಾವಂತೋ ವಿಷಯಾಃ ಪ್ರೇಷ್ಠಾಸ್ತ್ರಿಲೋಕ್ಯಾಮಜಿತೇಂದ್ರಿಯಂ | ಸ ಶಕ್ನುವಂತಿತೇ ಸರ್ವೇ ಪ್ರತಿ ಪೂರಯಿತುಂ ನೃಪ || ಭಾಗವತ ಪುರಾಣ || ಅರ್ಥ: ಸುಖ ಸಾಧನಗಳಾದ ವಿಷಯಗಳು ಸಮಸ್ತ ಸೃಷ್ಟಿಯಲ್ಲಿ ಎಷ್ಟಿವೆಯೋ ಅವೆಲ್ಲ ಒಟ್ಟಾದರೂ ಇಂದ್ರಿಯಗಳ ಸೆಳೆತಕ್ಕೆ ಒಳಗಾದ ವ್ಯಕ್ತಿಯನ್ನು ತೃಪ್ತಿ ಪಡಿಸಲಾರವು. ತಾತ್ಪರ್ಯ: ಮನುಷ್ಯನಿಗೆ ಪಂಚೇಂದ್ರಿಯಗಳು ಇವೆ. ಕಣ್ಣು, ಕಿವಿ, ನಾಲಿಗೆ, ಮೂಗು ಹಾಗೂ ಚರ್ಮ -ಇವು ಪಂಚೇಂದ್ರಿಯಗಳು. ಈ ಇಂದ್ರಿಯಗಳ ಸೆಳೆತ ಅಸಾಧಾರಣವಾದದ್ದು. ಇಂದ್ರಿಯಗಳ ಸೆಳೆತವು ತುಂಬಾ ಶಕ್ತಿಯುತವಾದದ್ದು. […]
ಸನಾತನ ಸಾಹಿತ್ಯದ ಪ್ರಬೋಧಕ ಗೀತೆಗಳು
ನಮಗೆ ಭಗವದ್ಗೀತೆ ಗೊತ್ತು. ಭಗವದ್ಗೀತೆಯಂತೆಯೇ ಇನ್ನಿತರ ಕೆಲವು ತಿಳಿವಿನ ಗಣಿಗಳೂ ಇವೆ. ಅವುಗಳಲ್ಲಿ ಎಂಟು ಗೀತೆಗಳ ಕಿರು ಮಾಹಿತಿ ಇಲ್ಲಿದೆ… ಅನು ಗೀತಾ ಕುರುಕ್ಷೇತ್ರ ಯುದ್ಧಾನಂತರ ಪಾಂಡವರು ರಾಜ್ಯಕಾರ್ಯಗಳಲ್ಲಿ ನಿರತರಾಗುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಬೋಧಿಸಿದ ಗೀತೆ ಇದು. ಉದ್ಧವ ಗೀತಾ ಭಾಗವತ ಪುರಾಣದಲ್ಲಿ ಬರುವ ಉದ್ಧವ ಗೀತೆಯನ್ನು ಹಂಸ ಗೀತಾ ಎಂದೂ ಕರೆಯಲಾಗುತ್ತದೆ. ಶ್ರೀ ಕೃಷ್ಣ ತನ್ನ ಅವತಾರ ಲೀಲೆ ಮುಗಿಸಿ ವೈಕುಂಠಕ್ಕೆ ತೆರಳುವ ಮುನ್ನ ತನ್ನ ಸಂಗಾತಿ ಉದ್ಧವನಿಗೆ ನೀಡುವ ಬೋಧನೆ […]