ಬಿಡುಗಡೆಯ ಮಾತಿಗೆ ಮೊದಲು ಬಂಧನದ ಮೂಲ ಅರಿಯಿರಿ : ಸ್ವಾಮಿ ರಾಮತೀರ್ಥ ವಿಚಾರ ಧಾರೆ

ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

ನಿಜವಾದ ಬೋಧನೆ ಯಾವುದು? : ಪರಮಹಂಸ ವಚನ ವೇದ

ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.